ಶ್ರೀರಾಮಜನ್ಮಭೂಮಿ ಆಂದೋಲನದ ಸಂತ ಡಾ. ರಾಮವಿಲಾಸ್ ದಾಸ್ ವೇದಾಂತಿ ದೇಹತ್ಯಾಗ : Dr Ram Vilas Vedanti

ಸಂತ ಡಾ. ರಾಮ್ ವಿಲಾಸ್ ದಾಸ್ ವೇದಾಂತಿ

ರೀವಾ (ಮಧ್ಯಪ್ರದೇಶ) – ಭಾಜಪದ ಮಾಜಿ ಸಂಸದ ಮತ್ತು ಶ್ರೀರಾಮಜನ್ಮಭೂಮಿ ಆಂದೋಲನದ ಪ್ರಮುಖ ಸಂತ ಡಾ. ರಾಮವಿಲಾಸ ದಾಸ್ ವೇದಾಂತಿ ಅವರು ಇಲ್ಲಿ ದೇಹತ್ಯಾಗ ಮಾಡಿದರು. ಅಲ್ಲಿ ಅವರ ರಾಮಕಥೆ ನಡೆಯುತ್ತಿತ್ತು. ಈ ಸಮಯದಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಅವರು ಎರಡು ದಿನಗಳಿಂದ ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರ ಪಾರ್ಥಿವ ಶರೀರವನ್ನು ಅಯೋಧ್ಯೆಗೆ ಕೊಂಡೊಯ್ಯಲಾಗುತ್ತದೆ.

ರಾಮವಿಲಾಸ್ ವೇದಾಂತಿ ಅವರು ಹನುಮಾನ್ ಗಢಿಯ ಮಹಂತ್ ಅಭಿರಾಮ್ ದಾಸ್ ಅವರ ಶಿಷ್ಯರಾಗಿದ್ದರು. ಅಯೋಧ್ಯೆಯಲ್ಲಿ ವಸಿಷ್ಠ ಭವನ ಎಂಬ ಹೆಸರಿನ ಅವರ ಆಶ್ರಮವೂ ಇದೆ. ೨೦೨೦ ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಬಾಬರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.