ಕಾಂಗ್ರೆಸ್ ಸರಕಾರದಿಂದ ವಿಧಾನಸಭೆಯಲ್ಲಿ ಮಾಹಿತಿ !

ಬೆಳಗಾವಿ – ಕಲಬುರಗಿಯ ಚಿತ್ತಾಪುರದಲ್ಲಿ ರಾ.ಸ್ವ. ಸಂಘದ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವಾಗ ಕಲಬುರಗಿ ಜಿಲ್ಲಾಡಳಿತವು ಕಾನೂನು-ಸುವ್ಯವಸ್ಥೆಯ ಕಾರಣ ನೀಡಿತ್ತು; ಆದರೆ ನ್ಯಾಯಾಲಯದ ಆದೇಶದ ನಂತರ ರಾಜ್ಯದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡಲಾಯಿತು. ಈಗ, ‘ರಾಜ್ಯಾದ್ಯಂತ ಸಂಘದ ಪಥಸಂಚಲನಗಳಿಂದ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸಲಿಲ್ಲ’ ಎಂಬುದನ್ನು ಸ್ವತಃ ಕಾಂಗ್ರೆಸ್ ಸರಕಾರವೇ ವಿಧಾನಸಭಾ ಅಧಿವೇಶನದಲ್ಲಿ ಒಪ್ಪಿಕೊಂಡಿದೆ. ಅಧಿವೇಶನದಲ್ಲಿ ಭಾಜಪದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಂಘದ ಪಥಸಂಚಲನಗಳ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಲಿಖಿತ ಉತ್ತರದಲ್ಲಿ, ರಾಜ್ಯದಲ್ಲಿ ಒಟ್ಟು ೫೧೮ ಸ್ಥಳಗಳಲ್ಲಿ ಸಂಘದ ಪಥಸಂಚಲನಗಳು ನಡೆದಿವೆ. ಸುಮಾರು ೨ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಜಗಳ ಅಥವಾ ಧಾರ್ಮಿಕ ಗಲಭೆಗಳು ಸಂಭವಿಸಲಿಲ್ಲ.
ಸಂಘ ದ್ವೇಷಿ ಪ್ರಿಯಾಂಕ್ ಖರ್ಗೆ ಅವರ ಜಿಲ್ಲೆಯಲ್ಲಿ ೫೧ ಸ್ಥಳಗಳಲ್ಲಿ ಪಥಸಂಚಲನ !
ಸಂಘದ ಪಥಸಂಚಲನಕ್ಕೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೊದಲು ವಿರೋಧ ವ್ಯಕ್ತಪಡಿಸಿದ್ದರು ಮತ್ತು ವಿಶೇಷವೆಂದರೆ, ಗೃಹ ಸಚಿವರ ಉತ್ತರದಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಜಿಲ್ಲೆಯಲ್ಲಿ ೫೧ ಪಥಸಂಚಲನಗಳು ನಡೆದಿವೆ. ಇದರಲ್ಲಿ ೬-೭ ಸಾವಿರ ಸ್ವಯಂಸೇವಕರು ಭಾಗವಹಿಸಿದ್ದರು. ಅತಿ ಹೆಚ್ಚು ೯೭ ಪಥಸಂಚಲನಗಳು ಬೆಂಗಳೂರು ನಗರದಲ್ಲಿ ನಡೆದವು. ಇದರಲ್ಲಿ ೨೭ ರಿಂದ ೩೦ ಸಾವಿರ ಸ್ವಯಂಸೇವಕರು ಭಾಗವಹಿಸಿದ್ದರು.
ಸಂಪಾದಕೀಯ ನಿಲುವುಪಥಸಂಚಲನಕ್ಕೆ ಅನುಮತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗುತ್ತದೆ ಎನ್ನುತ್ತಿದ್ದ ಕಾಂಗ್ರೆಸ್ಗೆ ಇದು ತಿರುಗೇಟು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!