೧೦ ಬಾಂಗ್ಲಾದೇಶಿ ನುಸುಳುಕೋರರಿಗೆ ೨ ವರ್ಷಗಳ ಜೈಲು ಶಿಕ್ಷೆ! : Udupi Bangladesh Infiltrators Arrested

ಬಾಂಗ್ಲಾದೇಶಿ ನುಸುಳುಕೋರರ ಬಂಧನ

ಉಡುಪಿ – ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ೧೦ ಬಾಂಗ್ಲಾದೇಶಿ ನುಸುಳುಕೋರರಿಗೆ ಜಿಲ್ಲಾ ನ್ಯಾಯಾಲಯವು ೨ ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ೧೦ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. ಇವರಲ್ಲಿ ಹಕೀಮ್ ಅಲಿ, ಸುಜೋನ್ ಎಸ್.ಕೆ., ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಮ್ ಎಸ್.ಕೆ., ರಾಜಿಕುಲ್ ಎಸ್.ಕೆ., ಮಹಮ್ಮದ್ ಸೊಜೀಬ್, ರಿಮುಲ್, ಮಹಮ್ಮದ್ ಇಮಾಮ್ ಶೇಖ್ ಮತ್ತು ಮಹಮ್ಮದ್ ಜಹಾಂಗೀರ್ ಆಲಂ ಸೇರಿದ್ದಾರೆ. ಮಲ್ಪೆ ಪೊಲೀಸರು ಇವರನ್ನು ಅಕ್ಟೋಬರ್ ೧೧, ೨೦೨೪ ರಂದು ಬಂಧಿಸಿದ್ದರು. ತನಿಖೆಯಲ್ಲಿ ಆರೋಪಿಗಳು ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸಿರುವುದು ಬೆಳಕಿಗೆ ಬಂದಿತ್ತು. ಈ ಬಾಂಗ್ಲಾದೇಶಿ ನುಸುಳುಕೋರರು ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆರೋಪಿ ಉಸ್ಮಾನ್ ಎಂಬಾತನು ಇವರ ಕೆಲಸವನ್ನು ವ್ಯವಸ್ಥೆಗೊಳಿಸಿದ್ದನು. (ಬಾಂಗ್ಲಾದೇಶಿ ಒಳನುಸುಳಿದವರನ್ನು ಜೈಲಿಗೆ ಕಳುಹಿಸುವ ಬದಲು ಅವರ ದೇಶಕ್ಕೆ ಕಳುಹಿಸಬೇಕು ಎಂದು ಭಾರತೀಯ ನಾಗರಿಕರು ಭಾವಿಸಿದರೆ, ಅದು ತಪ್ಪಾಗಲಾರದು! – ಸಂಪಾದಕರು)