ಪವಿತ್ರ ಬೆಟ್ಟದ ಮೇಲೆ ದೀಪ ಪ್ರಜ್ವಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಕಾರಣ ಹಿಂದೂ ದ್ವೇಷಿ ರಾಜಕೀಯ ಪಕ್ಷಗಳಿಂದ ಆಕ್ರೋಶ
(ಮಹಾಭಿಯೋಗ ಎಂದರೆ ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿಯ ಅಧಿಕಾರ ಮತ್ತು ಜವಾಬ್ದಾರಿಗಳನ್ನು ತೆಗೆದುಹಾಕುವ ಪ್ರಕ್ರಿಯೆ)

ನವದೆಹಲಿ – ಮದ್ರಾಸ್ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ‘ಇಂಡಿ ಮೈತ್ರಿಕೂಟ’ ತೀವ್ರ ನಿಲುವು ತಾಳಿದೆ. ಡಿಸೆಂಬರ್ 9 ರಂದು, ಈ ಮೈತ್ರಿಕೂಟದ 100 ಕ್ಕೂ ಹೆಚ್ಚು ಸಂಸದರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ, ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾಪವನ್ನು ತರಬೇಕು ಎಂದು ಒತ್ತಾಯಿಸಿದರು. ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ದೇವಸ್ಥಾನಕ್ಕೆ ಸಂಬಂಧಿಸಿದ ವಿವಾದಿತ ಸ್ಥಳದಲ್ಲಿ ಸಂಪ್ರದಾಯದಂತೆ ದೀಪ ಪ್ರಜ್ವಲಿಸಲು ನಿರ್ದೇಶನ ನೀಡಿ ಸುಮ್ಮನಾಗಲಿಲ್ಲ, ಈ ಆದೇಶವನ್ನು ಪಾಲಿಸದಿದ್ದರೆ ಭಕ್ತರು ಸ್ವತಃ ದೀಪ ಹಚ್ಚಲು ಅನುಮತಿ ನೀಡಿದರು ಮತ್ತು ಅವರ ರಕ್ಷಣೆಗೆ ವ್ಯವಸ್ಥೆ ಮಾಡುವಂತೆ ಮುಕ್ತ ಅನುಮತಿ ನೀಡಿದರು. ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ (ದ್ರಾವಿಡ ಮುನ್ನೇತ್ರ ಕಳಗಂ – ದ್ರಾವಿಡ ಜನರ ಪಕ್ಷ) ನ್ಯಾಯಾಲಯದ ಈ ನಿರ್ಧಾರದ ಬಗ್ಗೆ ಕೋಪವಿತ್ತು.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಮೇಲೆ ಪಕ್ಷಪಾತದ ಆರೋಪ
ವಿರೋಧ ಪಕ್ಷದವರು ಲೋಕಸಭೆಯ ಸ್ಪೀಕರ್ಗೆ ನೀಡಿದ ಸೂಚನೆಯಲ್ಲಿ, ನ್ಯಾಯಮೂರ್ತಿ ಸ್ವಾಮಿನಾಥನ್ ಅವರ ಮೇಲೆ ದುರ್ನಡತೆಯ ಆರೋಪ ಮಾಡಿದ್ದಾರೆ. ಒಂದು ವರದಿಯ ಪ್ರಕಾರ, ವಿರೋಧ ಪಕ್ಷದ ಸಂಸದರು ಅವರ ನಿರ್ಧಾರ ಪ್ರಕ್ರಿಯೆಯಲ್ಲಿನ ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ಜಾತ್ಯತೀತ ನಡವಳಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಶೇಷ ಸಮುದಾಯಗಳ ಹಿರಿಯ ವಕೀಲರೊಂದಿಗೆ ಅವರ ವರ್ತನೆಯಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಲಾಗಿದೆ. ಅವರು ಪ್ರಕರಣಗಳಲ್ಲಿ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪ್ರಕಾರ ತೀರ್ಪು ನೀಡುತ್ತಾರೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತಾರೆ ಎಂದು ಕೆಲವು ಸಂಸದರು ನಂಬಿದ್ದಾರೆ.
ಈ ಮಹಾಭಿಯೋಗದ ಬೇಡಿಕೆಗೆ ಡಿಎಂಕೆ ಪಕ್ಷದ ಕನಿಮೊಳಿ, ಲೋಕಸಭೆಯ ಪಕ್ಷದ ನಾಯಕ ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸೇರಿದಂತೆ 100 ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ.
ಏನಿದು ಪ್ರಕರಣ?ತಿರುಪ್ಪರನ್ ಕುದ್ರಂ ಬೆಟ್ಟದ ಮೇಲೆ ದೀಪ ಪ್ರಜ್ವಲಿಸಲು ಆದೇಶ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ತಮಿಳುನಾಡಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಧಿಕಾರಿಗಳಿಗೆ ಮಧುರೈ ಜಿಲ್ಲೆಯ ಪವಿತ್ರ ತಿರುಪ್ಪರನ್ ಕುನ್ರಂ ಬೆಟ್ಟದ ಮೇಲಿನ ದೀಪಸ್ತಂಭದ ಮೇಲೆ ದೀಪವನ್ನು ಹಚ್ಚಲು ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದ್ದರು. ಈ ಸ್ಥಳದ ಬಗ್ಗೆ ದೇವಸ್ಥಾನ ಮತ್ತು ಹತ್ತಿರದ ದರ್ಗಾದ ನಡುವೆ ವಿವಾದವಿದೆ. ಡಿಸೆಂಬರ್ 1, 2025 ರಂದು ನೀಡಿದ ಆದೇಶದಲ್ಲಿ, ದೀಪ ಹಚ್ಚುವ ಜವಾಬ್ದಾರಿ ದೇವಸ್ಥಾನದ್ದು ಎಂದು ಅವರು ಸ್ಪಷ್ಟಪಡಿಸಿದ್ದರು. ಆದೇಶ ಪಾಲಿಸದಿದ್ದರೆ ಭಕ್ತರಿಗೆ ನೀಡಿದ ಅನುಮತಿ ದೀಪ ಪ್ರಜ್ವಲನ ಮಾಡುವುದರಿಂದ ದರ್ಗಾ ಅಥವಾ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಚ್ಚ ನ್ಯಾಯಾಲಯವು ಆದೇಶದಲ್ಲಿ ತಿಳಿಸಿತ್ತು. ರಾಜ್ಯವು ಆದೇಶವನ್ನು ನಿರ್ಲಕ್ಷಿಸಿದ ನಂತರ, ಡಿಸೆಂಬರ್ 3 ರಂದು ನ್ಯಾಯಾಲಯವು ಮತ್ತೊಂದು ಆದೇಶವನ್ನು ಹೊರಡಿಸಿ, ಭಕ್ತರು ಸ್ವತಃ ದೀಪ ಹಚ್ಚಲು ಅನುಮತಿ ನೀಡಿತು. ಅದರೊಂದಿಗೆ ಅವರ ರಕ್ಷಣೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು (CISF) ನಿಯೋಜಿಸಲು ನಿರ್ದೇಶನ ನೀಡಿತು. ಆದೇಶವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಂಗ ನಿಂದನೆಯ ನೋಟಿಸ್ ಸಹ ನೀಡಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯದ ಸ್ಟಾಲಿನ್ ಸರಕಾರ ಮೊದಲು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು ಮತ್ತು ನಂತರ ಅವರ ನಾಯಕತ್ವದಲ್ಲಿ ‘ಇಂಡಿ ಮೈತ್ರಿಕೂಟ’ ಮಹಾಭಿಯೋಗ ಪ್ರಸ್ತಾಪವನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿತು. |
ಸಂಪಾದಕೀಯ ನಿಲುವುಹಿಂದೂಗಳ ಪರವಾಗಿ ನ್ಯಾಯಾಲಯವು ನ್ಯಾಯ ನೀಡಬಾರದು ಎಂಬ ಮಟ್ಟಕ್ಕೆ ಹಿಂದೂ ದ್ವೇಷಿ ರಾಜಕೀಯ ಪಕ್ಷಗಳು ಈಗ ತಲುಪಿವೆ. ಇಂತಹವರ ಕೈಗೆ ಕೇಂದ್ರದಲ್ಲಿ ಸರಕಾರ ಸಿಕ್ಕಿದ್ದರೆ ಹಿಂದೂಗಳಿಗೆ ಏನಾಗುತ್ತಿತ್ತು ಎಂಬುದನ್ನು ಗಮನಿಸಿದರೆ, ಭಾರತವನ್ನು ಆದಷ್ಟು ಬೇಗ ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು ಅವಶ್ಯಕವಾಗುತ್ತದೆ ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ