ಶ್ರೀಮಲಂಗಗಡದಲ್ಲಿ ಅಧಿಕೃತ ಉದ್ಘಾಟನೆಗೂ ಮುನ್ನವೇ ‘ಫ್ಯುನಿಕುಲರ್’ ರೈಲು ಪ್ರಾರಂಭ! : Funicular Train

ರಾಜಕೀಯ ಬೆಂಬಲ ಹೊಂದಿರುವ ಮುಸ್ಲಿಂ ಧಾರ್ಮಿಕ ನಾಯಕನೊಬ್ಬ ವೈಯಕ್ತಿಕ ಕೆಲಸಕ್ಕೆ ರೈಲು ಆರಂಭಿಸಿದ ಬಗ್ಗೆ ಚರ್ಚೆ!

ಶ್ರೀಮಲಂಗಢದಲ್ಲಿ ‘ಫ್ಯೂನಿಕ್ಯುಲರ್’ ರೈಲುಮಾರ್ಗ

ಠಾಣೆ – ಶ್ರೀಮಲಂಗಗಡದಲ್ಲಿ ‘ಫ್ಯುನಿಕುಲರ್’ ರೈಲಿನ ಕೆಲಸ ಪೂರ್ಣಗೊಳ್ಳಬೇಕಾಗಿತ್ತು, ಆದರೆ ಡಿಸೆಂಬರ್ 5 ರಂದು, ಅಂದರೆ ಶುಕ್ರವಾರದಂದು, ಮುಸ್ಲಿಂ ಧಾರ್ಮಿಕ ನಾಯಕರೊಬ್ಬರು ತಮ್ಮದೇ ಅಧಿಕಾರದಲ್ಲಿ ವೈಯಕ್ತಿಕ ಕೆಲಸಕ್ಕೆ ರೈಲನ್ನು ಪ್ರಾರಂಭಿಸಿದ್ದಾರೆ. ಈ ಘಟನೆಯು ಲೋಕೋಪಯೋಗಿ ಇಲಾಖೆ ಮತ್ತು ಇಡೀ ಆಡಳಿತವು ತಲೆ ತಗ್ಗಿಸುವಂತೆ ಮಾಡಿದೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

1. ಏಷ್ಯಾ ಖಂಡದ ಅತಿ ಉದ್ದದ ಮಾರ್ಗವೆಂದು ಗುರುತಿಸಲ್ಪಟ್ಟಿರುವ ಠಾಣೆ ಜಿಲ್ಲೆಯ ಶ್ರೀಮಲಂಗಗಡದ ‘ಫ್ಯುನಿಕುಲರ್’ ರೈಲು ಅಧಿಕೃತವಾಗಿ ಉದ್ಘಾಟನೆಗೊಳ್ಳಬೇಕಿತ್ತು.

2. ಉದ್ಘಾಟನೆಗೂ ಮುನ್ನವೇ ಆ ಮುಸ್ಲಿಂ ನಾಯಕನು ರೈಲಿನ ಬೋಗಿಗಳನ್ನು ಹೂಮಾಲೆಗಳಿಂದ ಅಲಂಕರಿಸಿ, ತನ್ನ ಮನೆಯ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರ ಓಡಾಟಕ್ಕಾಗಿ ರೈಲು ಓಡಿಸಿದ್ದಾನೆ. ಈ ಕುರಿತು ಸುದ್ದಿ ಹಾಗೂ ಹಲವು ವಿಡಿಯೋಗಳು ಪ್ರಸಾರವಾಗಿವೆ.

3. ಸಾರ್ವಜನಿಕ ಪ್ರಯಾಣಿಕರ ಸಾರಿಗೆಗಾಗಿ ಇರುವ ಇಂತಹ ಸೌಲಭ್ಯಗಳಿಗೆ ತಾಂತ್ರಿಕ ತಪಾಸಣೆ, ಸುರಕ್ಷತಾ ಪ್ರಮಾಣಪತ್ರ, ತುರ್ತು ನಿರ್ವಹಣಾ ವ್ಯವಸ್ಥೆ ಮತ್ತು ಕಾರ್ಯಾಚರಣೆಯ ಅನುಮತಿ ಕಡ್ಡಾಯವಾಗಿರುತ್ತದೆ. ಈ ‘ಫ್ಯುನಿಕುಲರ್’ನ ಸುರಕ್ಷತಾ ತಪಾಸಣೆ, ತಾಂತ್ರಿಕ ಅನುಮತಿ ಮತ್ತು ಅದನ್ನು ಓಡಿಸಲು ಅಂತಿಮ ಅನುಮತಿ ದೊರೆಯದಿದ್ದರೂ, ಅದನ್ನು ಪ್ರಾರಂಭಿಸಲಾಗಿದೆ.

‘ಫ್ಯುನಿಕುಲರ್’ ರೈಲು ಎಂದರೇನು?

ಫ್ಯುನಿಕುಲರ್ ಎಂದರೆ ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಇಳಿಜಾರುಗಳಲ್ಲಿ ಎರಡು ಬೋಗಿಗಳ ಸಹಾಯದಿಂದ ಪ್ರಯಾಣಿಕರನ್ನು ಅಥವಾ ಸರಕುಗಳನ್ನು ಸಾಗಿಸುವ ರೈಲು ವ್ಯವಸ್ಥೆಯಾಗಿದೆ. ಇಲ್ಲಿ ಒಂದು ಬೋಗಿ ಮೇಲಕ್ಕೆ ಹೋದಾಗ, ಇನ್ನೊಂದು ಕೆಳಗೆ ಬರುತ್ತದೆ. ಅವುಗಳನ್ನು ಹಗ್ಗದಿಂದ ಪರಸ್ಪರ ಜೋಡಿಸಲಾಗಿರುತ್ತದೆ.

ರಾಜಕೀಯ ಬೆಂಬಲದಿಂದಾಗಿ ಮುಸ್ಲಿಂ ನಾಯಕನ ಮೇಲೆ ಯಾವುದೇ ಕ್ರಮವಿಲ್ಲ!

ರಾತ್ರಿ 10 ಗಂಟೆಯವರೆಗೆ ಕತ್ತಲೆಯಲ್ಲಿಯೂ ಬೆಟ್ಟದ ಮೇಲೆ ಈ ರೈಲಿನ ಸಂಚಾರ ನಡೆದಿತ್ತು. ವಿಶೇಷವೆಂದರೆ, ಒಬ್ಬ ಶಾಸಕರು ಸಹ ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂದು ಸ್ಥಳೀಯರು ‘ಸನಾತನ ಪ್ರಭಾತ’ ದಿನಪತ್ರಿಕೆಗೆ ತಿಳಿಸಿದ್ದಾರೆ. ‘ಈ ರೈಲನ್ನು ತಯಾರಿಸಿದ ಸಂಸ್ಥೆಗೆ ರೈಲು ಓಡಿಸಲು ‘ಆದೇಶ’ ನೀಡುವ ಸಾಧ್ಯತೆ ಇದೆ. ಈ ಮತಾಂಧ ನಾಯಕನಿಗೆ ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಇರುವುದರಿಂದಲೇ ಈ ಬಗ್ಗೆ ಇಲ್ಲಿಯವರೆಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ’ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

 

ಸಂಪಾದಕೀಯ ನಿಲುವು

  • ಭಾರತದ ಬಹುತೇಕ ಮುಸ್ಲಿಮರು ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದಿಲ್ಲ. ಅವರಿಗೆ ಕಾನೂನಿನ ಭಯವಿಲ್ಲದ ಕಾರಣ, ಅವರು ಯಾವುದೇ ಕಾನೂನು ಅಥವಾ ನಿಯಮವನ್ನು ಉಲ್ಲಂಘಿಸಲು ಹಿಂಜರಿಯುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ. ಈ ರೈಲನ್ನು ಪ್ರಾರಂಭಿಸಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು!
  • ಮುಸ್ಲಿಂ ನಾಯಕನ ಮಾತಿನ ಮೇರೆಗೆ ರೈಲ್ವೆ ಇಲಾಖೆಯ ಸಿಬ್ಬಂದಿ ರೈಲನ್ನು ಹೇಗೆ ಪ್ರಾರಂಭಿಸಿದರು? ಸಂಬಂಧಪಟ್ಟವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದೂ ಸಾರ್ವಜನಿಕರ ಮುಂದೆ ಬರಬೇಕು!