ದೇಶದಲ್ಲಿ ‘ಗಜವಾ-ಎ-ಹಿಂದ್’ ಅಲ್ಲ, ‘ಭಗವಾ-ಎ-ಹಿಂದ್’ ಬೇಕು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ Kolkata Mass Gita Event

ಕೋಲಕಾತಾದಲ್ಲಿ ೫ ಲಕ್ಷ ಭಕ್ತರಿಂದ ಸಾಮೂಹಿಕ ಗೀತಾ ಪಠಣ!

(‘ಗಜವಾ-ಎ-ಹಿಂದ್’ ಎಂದರೆ ಭಾರತವನ್ನು ಇಸ್ಲಾಮೀಕರಣಗೊಳಿಸುವ ಯುದ್ಧ)

ಕೋಲಕಾತಾ (ಬಂಗಾಳ) – ಇಲ್ಲಿ ಪ್ರತಿ ವರ್ಷದಂತೆ ಡಿಸೆಂಬರ್ ೭ ರಂದು ಸಾಮೂಹಿಕ ಗೀತಾ ಪಠಣವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ೫ ಲಕ್ಷ ಭಕ್ತರು ಪಾಲ್ಗೊಂಡಿದ್ದರು. ಇದರಲ್ಲಿ ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ, ಹಾಗೂ ಅನೇಕ ಸಾಧು-ಸಂತರು ಭಾಗವಹಿಸಿದ್ದರು. ‘ದೇಶದಲ್ಲಿ ‘ಗಜವಾ-ಎ-ಹಿಂದ್’ ಅಲ್ಲ, ಆದರೆ ‘ಭಗವಾ-ಎ-ಹಿಂದ್’ ಬೇಕು, ಅಂದರೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಿಂದೂ ಸನಾತನ ಸಂಸ್ಕೃತಿಯ ಗೌರವ ಬೇಕು,’ ಎಂದು ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಈ ಸಂದರ್ಭದಲ್ಲಿ ಹೇಳಿದರು.

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಹೇಳಿಕೆಯ ಪ್ರಕಾರ, ಸನಾತನ ಐಕ್ಯತೆಯೇ ದೇಶ ಮತ್ತು ಜಗತ್ತಿನ ಶಾಂತಿ ಮತ್ತು ಸ್ಥಿರತೆಯ ಸಾಧನವಾಗಿದೆ. ಜಾತಿ, ಪಂಥ, ಸಂಪ್ರದಾಯಗಳ ಭೇದಗಳನ್ನು ಮೀರಿ ಹಿಂದುತ್ವ ಮತ್ತು ಸನಾತನ ಧರ್ಮದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕವಾಗಿದೆ.