ಭಾಜಪದಿಂದ ವಿರೋಧ!

ನವ ದೆಹಲಿ – ಸಂವಿಧಾನದ ಕಲಂ ೨೫ ಮತ್ತು ೨೬ ರದ್ದುಗೊಳಿಸಲಾಗಿದೆ. ದೇಶದಲ್ಲಿ ಮುಸಲ್ಮಾನರ ಜೀವನವು ಹೆಚ್ಚು ಹೆಚ್ಚು ಕಠಿಣವಾಗುತ್ತಿದೆ. ಸುಮಾರು ೭೦ ಪ್ರತಿಶತ ವಕ್ಫ್ ಆಸ್ತಿ ಇನ್ನೂ ನೋಂದಣಿಯಾಗಿಲ್ಲ, ಇದರಿಂದಾಗಿ ಮುಸಲ್ಮಾನರಲ್ಲಿ ಅಭದ್ರತೆಯ ಭಾವನೆ ಹೆಚ್ಚುತ್ತಿದೆ. (ಭಾರತದಲ್ಲಿ ಮುಸಲ್ಮಾನರಲ್ಲಿ ಅಲ್ಲ, ಬದಲಾಗಿ ಅವರ ಜಿಹಾದಿ ಕೃತ್ಯಗಳಿಂದಾಗಿ ಹಿಂದುಗಳಲ್ಲಿ ಅಭದ್ರತೆಯ ಭಾವನೆ ನಿರ್ಮಾಣವಾಗಿದೆ. ತಮ್ಮನ್ನು ತಾವು ಸಂತ್ರಸ್ತರೆಂದು ಬಿಂಬಿಸಿ ಜಿಹಾದ್ನ ಭಾಷೆ ಮಾತನಾಡುವ ಇಂತಹ ಕಟ್ಟರವಾದಿ ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವುದು ಅವಶ್ಯಕ! – ಸಂಪಾದಕರು) ಮುಸಲ್ಮಾನ ಸಮುದಾಯಕ್ಕೆ ಅದರ ಹಕ್ಕುಗಳಿಗಾಗಿ ಹೊಸ ಹೋರಾಟವನ್ನು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಮತ್ತೆ ಹೋರಾಡಬೇಕಾಗುತ್ತದೆ ಮತ್ತು ಜಿಹಾದ್ ಮಾಡಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾಹ್ ನದ್ವಿ ಅವರು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಹೇಳಿಕೆ ನೀಡಿದರು. ಸಮಾಜವಾದಿ ಪಕ್ಷದ ಸಂಸದ ನದ್ವಿ ಅವರು ಲೋಕಸಭೆಯಲ್ಲಿ ವಕ್ಫ್ ಆಸ್ತಿಯ ಕುರಿತು ಮಾತನಾಡುತ್ತಿದ್ದಾಗ ಈ ಹೇಳಿಕೆಯನ್ನು ನೀಡಿದರು. ಅವರ ಈ ಹೇಳಿಕೆಗೆ ಸದನದಲ್ಲಿ ಆಡಳಿತ ಪಕ್ಷದ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅವರ ಹೇಳಿಕೆಯು ಪ್ರಚೋದನಕಾರಿ ಮತ್ತು ಬೇಜವಾಬ್ದಾರಿಯುತವಾಗಿದೆ ಎಂದು ಹೇಳಿದರು. ‘ಸಂಸತ್ತಿನಲ್ಲಿ ‘ಜಿಹಾದ್’ನಂತಹ ಪದಗಳನ್ನು ಬಳಸುವುದರಿಂದ ಸಮಾಜದಲ್ಲಿ ತಪ್ಪಾದ ಸಂದೇಶ ಹೋಗುತ್ತದೆ ಮತ್ತು ಉದ್ವಿಗ್ನತೆ ಹೆಚ್ಚುತ್ತದೆ’ ಎಂದು ಆಡಳಿತ ಪಕ್ಷದ ಸಂಸದರು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ