
ನವದೆಹಲಿ – ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರರಾದ ರಾಗಿಣಿ ನಾಯಕ್ ಅವರು ‘ಎಕ್ಸ್’ (X) ಎಂಬ ಸಾಮಾಜಿಕ ಮಾಧ್ಯಮದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಎಐ (AI) ನಿರ್ಮಿತ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ (ಎಐ ನಿರ್ಮಿತ ವಿಡಿಯೋ ಎಂದರೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ತಯಾರಿಸಿದ ವಿಡಿಯೋ). ಈ ವಿಡಿಯೋದಲ್ಲಿ ಅಂತರರಾಷ್ಟ್ರೀಯ ಶೃಂಗಸಭೆ ಕಾಣುತ್ತಿದೆ. ಅಲ್ಲಿನ ಕೆಂಪು ಹಾಸಿಗೆಯ ಮೇಲೆ ಸೂಟ್ನಲ್ಲಿರುವ ಪ್ರಧಾನಿ ಮೋದಿ ಒಂದು ಕೈಯಲ್ಲಿ ಚಹಾ ಕೆಟಲಿ, ಇನ್ನೊಂದು ಕೈಯಲ್ಲಿ ಚಹಾ ಗ್ಲಾಸ್ ಹಿಡಿದು ಓಡಾಡುತ್ತಿರುವುದು ಕಾಣುತ್ತಿದೆ. ಆ ವೇಳೆ ಅವರು ‘ಚಹಾ ತೆಗೆದುಕೊಳ್ಳಿ ಚಹಾ’ ಎಂದು ಕೂಗುತ್ತಾ ಚಹಾ ಮಾರುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೋ ಕೆಳಗೆ ನಾಯಕ್ ಅವರು ‘ಇದನ್ನು ಈಗ ಯಾರು ಮಾಡಿದರು?’ ಎಂದು ಬರೆದಿದ್ದಾರೆ.
🛑 New Low in Congress Politics!
Congress spreads an AI-made video of PM Modi “selling tea” in a suit – pure hatred on display! 🤯
Insulting a chaiwala is an insult to every poor citizen of Bharat. 💔🇮🇳
The political existence of such a Congress, driven by this mindset, must… pic.twitter.com/mTwZt7wEX1
— Sanatan Prabhat (@SanatanPrabhat) December 3, 2025
೧. ಪ್ರಧಾನಿ ಮೋದಿ ಅವರು ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನಂತರ ‘ಚಿಕ್ಕಂದಿನಲ್ಲಿ ನಾನು ಚಹಾ ಮಾರಿ ದಿನ ಕಳೆದಿದ್ದೇನೆ. ಆದ್ದರಿಂದ ಬಡತನ ಎಂದರೇನು ಎಂಬುದು ನನಗೆ ತಿಳಿದಿದೆ’ ಎಂದು ನೆನಪಿಸಿಕೊಂಡಿದ್ದರು. ಅಂದಿನಿಂದ ದೇಶದಲ್ಲಿ ‘ಮೋದಿ ಮತ್ತು ಚಹಾ’ ಎಂಬ ಒಂದು ಸಮೀಕರಣ ಸೃಷ್ಟಿಯಾಗಿದೆ.
೨. ಕಾಂಗ್ರೆಸ್ನ ಈ ಕೃತ್ಯವನ್ನು ಭಾಜಪ ಟೀಕಿಸಿದೆ. ‘ದೇಶಕ್ಕಾಗಿ ಕೆಲಸ ಮಾಡುವ, ಹಾಗೆಯೇ ಇತರ ಹಿಂದುಳಿದ ವರ್ಗ ಮತ್ತು ಬಡತನದಿಂದ ಮೇಲೆ ಬಂದ ಪ್ರಧಾನಿ ಮೋದಿ ಅವರ ಎದುರು ಕೆಲಸಕ್ಕೆ ಬಾರದ ಕಾಂಗ್ರೆಸ್ ನಿಲ್ಲಲು ಸಾಧ್ಯವಿಲ್ಲ’ ಎಂದು ಭಾಜಪ ವಕ್ತಾರ ಶಹಜಾದ್ ಪೂನಾವಾಲಾ ಟೀಕಿಸಿದ್ದಾರೆ.
೩. ಬಿಹಾರ ಚುನಾವಣೆಯ ಸಮಯದಲ್ಲಿಯೂ ಕಾಂಗ್ರೆಸ್ನ ಒಬ್ಬ ನಾಯಕ ಪ್ರಧಾನಿ ಮೋದಿ ಅವರ ತಾಯಿಯ ಬಗ್ಗೆ ಇದೇ ರೀತಿ ಅಶ್ಲೀಲ ಟೀಕೆ ಮಾಡಿದ್ದರು. ಆ ಸಮಯದಲ್ಲಿ ಕಾಂಗ್ರೆಸ್ ಮೇಲೆ ಟೀಕೆಯ ಸುರಿಮಳೆಯಾಗಿತ್ತು.
ಸಂಪಾದಕೀಯ ನಿಲುವು
|
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ