ಭಾವನಗರ (ಗುಜರಾತ)ದಲ್ಲಿ ಸೈಬರ್ ವಂಚನೆ: ಕಾಂಗ್ರೆಸ್ ನಾಯಕ ಅರ್ಶಮಾನ ಖಾನ್ ಬಲೋಚ್ ನ ಬಂಧನ – Congress Leader Arshman Khan Arrested

ಭಾವನಗರ (ಗುಜರಾತ) – ಗುಜರಾತ್‌ನ ಭಾವನಗರ ಜಿಲ್ಲೆಯ ಕರ್ಣಾವತಿಯಲ್ಲಿ ನಡೆದ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ‘ಎನ್.ಎಸ್.ಯು.ಐ.’ (ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ಎಂಬ ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಅರ್ಶಮಾನ್ ಖಾನ್ ಬಲೋಚ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಲೋಚ್ ಈತನು ಪೊಲೀಸರ ಬಳಿ, ನಕಲಿ ಹೂಡಿಕೆ ಯೋಜನೆಯ ಮೂಲಕ 47 ಲಕ್ಷದ 50 ಸಾವಿರ ರೂಪಾಯಿಗಳ ವಂಚನೆಗೆ ಒಳಗಾಗಿದ್ದೇನೆ ಎಂದು ದೂರು ನೀಡಿದ್ದನು. ಈ ದೂರಿನ ಆಧಾರದ ಮೇಲೆ ಪೊಲೀಸರು ಅರ್ಶಮಾನ್ ಖಾನ್ ನನ್ನು ಬಂಧಿಸಿದ್ದಾರೆ. ಅರ್ಶಮಾನ್ ಖಾನ್, ಹವಾಲಾ ಹಣವನ್ನು ಸಂಗ್ರಹಿಸಲು ಬ್ಯಾಂಕ್ ಖಾತೆಗಳನ್ನು ಒದಗಿಸುವ ಮೂಲಕ ಸೈಬರ್ ವಂಚನೆ ಜಾಲಕ್ಕೆ ಸಹಾಯ ಮಾಡುತ್ತಿದ್ದನು. (ಹಣವನ್ನು ವರ್ಗಾಯಿಸಲು ಅರಬ್ ಮತ್ತು ದಕ್ಷಿಣ ಏಷ್ಯಾ ದೇಶಗಳು ಬಳಸುವ ಒಂದು ನಿರ್ದಿಷ್ಟ ವ್ಯವಸ್ಥೆ). ಅರ್ಶಮಾನ್ ಖಾನ್ ಹವಾಲಾ ಹಣದ ಮೇಲೆ ಶೇ. 25 ರಷ್ಟು ಕಮಿಷನ್ ನಿಗದಿಪಡಿಸಿದ್ದನು. ಸೈಬರ್ ವಂಚನೆಯ ಮೂಲಕ ಅವನು ಅಪಾರ ಪ್ರಮಾಣದ ಆಸ್ತಿಯನ್ನು ಸಂಗ್ರಹಿಸಿದ್ದನು. (ಅಪರಾಧಿಗಳಿಗೆ ಅಥವಾ ಭಯೋತ್ಪಾದಕರಿಗೆ ಧರ್ಮವಿರುವುದಿಲ್ಲ ಎಂದು ಹೇಳುವವರು, ಇಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಬಹುಪಾಲು ಆರೋಪಿಗಳು ಮುಸಲ್ಮಾನರೇ ಆಗಿರುತ್ತಾರೆ ಎಂಬುದನ್ನು ಸಹ ಗಮನದಲ್ಲಿ ಇಟ್ಟುಕೊಳ್ಳಬೇಕು! – ಸಂಪಾದಕರು)

1. ಅರ್ಶಮಾನ್ ಖಾನ್ ಬಲೋಚ್ ದುಬೈನಲ್ಲಿ ಒಂದು ಸೈಬರ್ ವಂಚನೆ ಜಾಲವನ್ನು ಭೇಟಿಯಾಗಿದ್ದನು. ಅಂದಿನಿಂದ, ಅವನು ಹವಾಲಾ ಹಣ ಸಂಗ್ರಹಿಸಲು ಬ್ಯಾಂಕ್ ಖಾತೆಗಳನ್ನು ಒದಗಿಸುವ ಮೂಲಕ ಸೈಬರ್ ವಂಚನೆ ಜಾಲಕ್ಕೆ ಸಹಾಯ ಮಾಡುತ್ತಿದ್ದನು.

2. ಈ ಬ್ಯಾಂಕ್ ಖಾತೆಗಳಲ್ಲಿ ಹಣ ಜಮೆಯಾದ ನಂತರ, ಅವನು ವಿವಿಧ ಜನರಿಂದ ಆ ಹಣವನ್ನು ಸಂಗ್ರಹಿಸುತ್ತಿದ್ದನು. ಅದರಲ್ಲಿ ಶೇ. 25 ರಷ್ಟು ಹಣವನ್ನು ತಾನೇ ಇಟ್ಟುಕೊಂಡು ಉಳಿದ ಮೊತ್ತವನ್ನು ಕ್ರಿಪ್ಟೋ ಕರೆನ್ಸಿಗೆ ಪರಿವರ್ತಿಸಿ ವಿದೇಶಿ ಸೈಬರ್ ಅಪರಾಧಿಗಳಿಗೆ ವರ್ಗಾಯಿಸುತ್ತಿದ್ದನು (ಕ್ರಿಪ್ಟೋ ಕರೆನ್ಸಿ ಎಂದರೆ ಆಭಾಸೀ ನಗದು. ಈ ನಗದಿಗೆ ಭೌತಿಕ ರೂಪ ಇರುವುದಿಲ್ಲ; ಆದರೆ ನೀವು ಆರ್ಥಿಕ ವ್ಯವಹಾರಗಳಿಗೆ ಅದನ್ನು ಬಳಸಬಹುದು).

3. ಬಲೋಚ್ ಈ ವಂಚನೆಯ ಬ್ಯಾಂಕ್ ಖಾತೆಗಳ ಮೂಲಕ ಕೋಟಿಗಟ್ಟಲೆ ರೂಪಾಯಿಗಳನ್ನು ಸಂಗ್ರಹಿಸಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ, ದೇಶದ್ರೋಹಿ ಮತ್ತು ಅಪರಾಧಿಗಳಿಂದ ತುಂಬಿರುವ ಕಾಂಗ್ರೆಸ್ ಅನ್ನು ಈಗ ನಿಷೇಧಿಸುವುದು ಆವಶ್ಯಕವಾಗಿದೆ!