
ಜಮ್ಮು – ಜಮ್ಮುವಿನ ಹಲವಾರು ಪ್ರಮುಖ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು, ವ್ಯಾಪಾರಿ ಸಂಘಟನೆಗಳ ಜೊತೆಗೆ ಸ್ಥಳೀಯ ಪ್ರಭಾವಿ ಗುಂಪುಗಳ ಸಹಯೋಗದೊಂದಿಗೆ ‘ಶ್ರೀ ಮಾತಾ ವೈಷ್ಣೋದೇವಿ ಸಂಘರ್ಷ ಸಮಿತಿ’ಯನ್ನು ಸ್ಥಾಪಿಸಿವೆ. ಕಾರ್ಗಿಲ್ ಯುದ್ಧದ ವೀರ ಕರ್ನಲ್ ಸುಖಬೀರ್ ಸಿಂಗ್ ಮಾನ್ಕೋಟಿಯಾ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ. ಸನಾತನ ಧರ್ಮ ಸಭಾ, ಜಮ್ಮು-ಕಾಶ್ಮೀರದ ಮುಖ್ಯಸ್ಥರಾದ ಪ್ರಶ್ನೋತಮ್ ದಾದಿಚಿ ಅವರು ಸಮಿತಿಯ ಸ್ಥಾಪನೆಯ ಅಧಿಕೃತ ಘೋಷಣೆ ಮಾಡಿದರು. ‘ಶ್ರೀ ಮಾತಾ ವೈಷ್ಣೋದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್’ಗೆ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಿರುವ ಪ್ರವೇಶವನ್ನು ರದ್ದುಗೊಳಿಸಲು ಸಂಘಟಿತ ಆಂದೋಲನವನ್ನು ಪ್ರಾರಂಭಿಸುವುದಾಗಿ ಸಮಿತಿಯು ಘೋಷಿಸಿದೆ.
೧. ಸಮಿತಿಯ ಸದಸ್ಯರ ಅಭಿಪ್ರಾಯದಂತೆ : ಈ ವೈದ್ಯಕೀಯ ಸಂಸ್ಥೆಯು ಹಿಂದೂ ಭಕ್ತರ ಕೊಡುಗೆಯಿಂದ ನಿರ್ಮಾಣಗೊಂಡಿದ್ದು, ಅದರ ನಿರ್ವಹಣೆಯೂ ಅದೇ ನಿಧಿಯಿಂದ ನಡೆಯುತ್ತಿದೆ. ಆದ್ದರಿಂದ, ಈ ಸಂಸ್ಥೆಯಲ್ಲಿನ ಸೀಟುಗಳನ್ನು ಕೇವಲ ಹಿಂದೂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಹಿಂದೂ ಭಕ್ತರ ಅರ್ಪಣೆಯಿಂದ ಸಂಸ್ಥೆಯ ನಿರ್ಮಾಣವಾಗಿರುವಾಗ, ಅದರ ಲಾಭ ಕೂಡ ಹಿಂದೂ ಸಮಾಜಕ್ಕೇ ಸಿಗಬೇಕು.
೨. ಶ್ರೀ ಮಾತಾ ವೈಷ್ಣೋದೇವಿ ಸಂಘರ್ಷ ಸಮಿತಿಯು ಆದಷ್ಟು ಬೇಗನೆ ಒಂದು ಮುಖ್ಯ ಸಮಿತಿಯ ರಚನೆ ಮಾಡುವುದಾಗಿ ಘೋಷಿಸಿದೆ. ಈ ನೂತನ ಸಮಿತಿಯ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಈ ಆಂದೋಲನಕ್ಕಾಗಿ ‘ ಹಿಂದೂ ಮನೆ ಫಾರ್ ಹಿಂದೂ ಕಾಸ್ ‘ (‘ಹಿಂದೂಗಳಿಗಾಗಿ ಹಿಂದೂಗಳ ಹಣ’) ಎಂಬ ಘೋಷವಾಕ್ಯವನ್ನು ಕೂಡ ಸಿದ್ಧಪಡಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!