‘ಬಾಂಬ್ ಸ್ಫೋಟಿಸುವ ಮಾರ್ಗವನ್ನು ಏಕೆ ಆರಿಸಿಕೊಂಡರು ಎಂದು ವೈದ್ಯರನ್ನು ಕೇಳಿ ?’ – ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಭಯೋತ್ಪಾದಕರನ್ನು ಬೆಂಬಲಿಸುವ ಪ್ರಶ್ನೆ

ಶ್ರೀನಗರ (ಜಮ್ಮು-ಕಾಶ್ಮೀರ) – ಪ್ರತಿಯೊಬ್ಬ ಕಾಶ್ಮೀರಿಯ ಮೇಲೆ ಬೊಟ್ಟು ಮಾಡಲಾಗುತ್ತಿದೆ. ನಾವು ಭಾರತೀಯರು ಎಂದು ಅವರು ಒಪ್ಪಿಕೊಳ್ಳುವ ದಿನ ಯಾವಾಗ ಬರಬಹುದು? ಇದಕ್ಕೆ ನಾವು ಜವಾಬ್ದಾರರಲ್ಲ. ಜವಾಬ್ದಾರಿಯುತ ವ್ಯಕ್ತಿಗಳನ್ನು ಕೇಳಿ, ಈ ವೈದ್ಯರುಗಳಿಗೆ (ಬಾಂಬ್ ಸ್ಫೋಟದ ಆರೋಪಿಗಳಿಗೆ) ಈ ಮಾರ್ಗವನ್ನು ಏಕೆ ಸ್ವೀಕರಿಸಬೇಕಾಯಿತು? ಕಾರಣ ಏನಿತ್ತು? ಇದರ ಆಳವಾದ ತನಿಖೆ ಮತ್ತು ಅಧ್ಯಯನ ಮಾಡುವುದು ಅಗತ್ಯವಾಗಿದೆ, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ದೆಹಲಿ ಬಾಂಬ್ ಸ್ಫೋಟದ ಬಗ್ಗೆ ಹೇಳಿಕೆ ನೀಡಿದರು. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಕಾಶ್ಮೀರಿ ಮುಸಲ್ಮಾನ ವೈದ್ಯರಾಗಿದ್ದಾರೆ.

ಫಾರೂಕ್ ಅಬ್ದುಲ್ಲಾ ಮಾತುಮುಂದುವರೆಸಿ, ಆಪರೇಷನ್ ಸಿಂಧೂರ ನಿಂದ ಏನೂ ಫಲಿತಾಂಶ ದೊರೆಯಲಿಲ್ಲ. ಇಂತಹ ಕಾರ್ಯಾಚರಣೆ ಮತ್ತೆ ನಡೆಯುವುದಿಲ್ಲ ಎಂದು ಆಶಿಸುತ್ತೇನೆ. ಈ ಕಾರ್ಯಾಚರಣೆಯಲ್ಲಿ ನಮ್ಮ 18 ಜನರು ಕೊಲ್ಲಲ್ಪಟ್ಟರು. ನಮ್ಮ ಗಡಿಗಳು ಅಪಾಯಕ್ಕೆ ಸಿಲುಕಿದವು. (ಇದರಿಂದ ಫಾರೂಕ್ ಅಬ್ದುಲ್ಲಾ ಕಟ್ಟರ ಪಾಕಿಸ್ತಾನ ಪ್ರೇಮಿ ಮತ್ತು ಜಿಹಾದಿ ಭಯೋತ್ಪಾದನಾ ಪ್ರೇಮಿ ಎಂದು ಸ್ಪಷ್ಟವಾಗುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

  • ‘ಯಾರ ಮೇಲೆ ತಥಾಕಥಿತ ದೌರ್ಜನ್ಯ ನಡೆದಿದ್ದರೆ, ಅವನು ಬಾಂಬ್ ಸ್ಫೋಟ ಮಾಡಿದರೆ ಅದು ಯೋಗ್ಯ’ ಎಂದು ಅಬ್ದುಲ್ಲಾ ಅವರಿಗೆ ಅನಿಸುತ್ತದೆಯೇ ?, ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳಿಂದ ಅವರು ಇದುವರೆಗೆ ಕಾಶ್ಮೀರದಲ್ಲಿ ಮತಾಂಧರನ್ನು ಗುರಿಯಾಗಿಸಿ ಅಸಂಖ್ಯಾತ ಸ್ಫೋಟಗಳನ್ನು ನಡೆಸುವುದು ನಿರೀಕ್ಷಿತವಾಗಿತ್ತು ಎಂದೇ ಹೇಳಬೇಕಾಗುತ್ತದೆ!
  • ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ, ಈಗಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ವಿಚಾರಗಳು ಒಂದೇ ಆಗಿವೆ. ಅವರು ಕೂಡ ಭಯೋತ್ಪಾದಕರನ್ನು ಬೆಂಬಲಿಸಿದ್ದಾರೆ. ಒಮರ್ ಅವರ ಅಜ್ಜ ಅಬ್ದುಲ್ಲಾ ಕೂಡ ರಾಷ್ಟ್ರದ್ರೋಹಿ ವಿಚಾರಗಳನ್ನು ಹೊಂದಿದ್ದರು. ಒಟ್ಟಾರೆಯಾಗಿ, ಈ ಕುಟುಂಬವು ಇದೇ ಮನಃಸ್ಥಿತಿಯಲ್ಲಿದೆ. ಇಂತಹವರನ್ನು ಸರ್ವಪಕ್ಷೀಯ ಸರಕಾರಗಳು ನಿರ್ಲಕ್ಷಿಸಿವೆ, ಇದು ನಾಚಿಕೆಗೇಡಿನ ಸಂಗತಿ!