ಗಿರ್‌ಗಾಂವ್ (ಮುಂಬಯಿ) ನಲ್ಲಿ ರೋಹಿಂಗ್ಯಾ ಮುಸ್ಲಿಂ ವ್ಯಾಪಾರಿಯಿಂದ ಹಿಂದೂ ಮಹಿಳೆಗೆ ಬೆದರಿಕೆ! Rohingya Muslim Attack Hindu Women

ಮುಂಬಯಿ – ಮಾಲ್ವಣಿ ನಂತರ ಈಗ ದಕ್ಷಿಣ ಮುಂಬಯಿನಲ್ಲಿಯೂ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರು ಪತ್ತೆಯಾಗಿದ್ದಾರೆ. ಗಿರ್‌ಗಾಂವ್‌ನಲ್ಲಿ ಒಬ್ಬ ತರಕಾರಿ ವ್ಯಾಪಾರಿಯಾಗಿರುವ ರೋಹಿಂಗ್ಯಾ ನುಸುಳುಕೋರ ಸ್ಥಳೀಯ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದರ ನಂತರ ಮುಂಬಯಿನ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಬೇಡಿಕೆ ಇಡುತ್ತಿದ್ದಾರೆ. ಈ ಪ್ರಕರಣದ ನಂತರ, ರಾಜ್ಯ ಕೌಶಲ್ಯ ಅಭಿವೃದ್ಧಿ ಸಚಿವರು ಮತ್ತು ಮುಂಬಯಿ ಉಪನಗರದ ಸಹ-ಪಾಲಕ ಸಚಿವರಾದ ಮಂಗಲ್ ಪ್ರಭಾತ ಲೋಧಾ ಅವರು ಮುಂಬಯಿ ಪೊಲೀಸ್ ಆಯುಕ್ತ ದೇವೇನ ಭಾರತಿ ಅವರನ್ನು ಭೇಟಿ ಮಾಡಿ, ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

ಗಿರ್‌ಗಾಂವ್‌ನಲ್ಲಿನ ನುಸುಳುಕೋರರ ಬಳಿ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಎಲ್ಲಾ ಆಧಾರ್ ಕಾರ್ಡ್‌ಗಳಲ್ಲಿ ಒಂದೇ ರೀತಿಯ ಜನ್ಮ ದಿನಾಂಕ ಕಂಡುಬಂದಿದೆ. ಕೆಲವು ದಿನಗಳ ಹಿಂದೆ ಪಶ್ಚಿಮ ಮುಂಬಯಿ ಉಪನಗರದ ಮಾಲ್ವಣಿಯಲ್ಲಿರುವ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮುಂಬಯಿ ಮಹಾನಗರ ಪಾಲಿಕೆ ಆಡಳಿತದಿಂದ ಕ್ರಮ ಕೈಗೊಳ್ಳಲಾಗಿತ್ತು; ಆದರೂ ಮುಂಬಯಿನ ವಿವಿಧ ಭಾಗಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರು ಕಂಡುಬರುತ್ತಿದ್ದಾರೆ. ಈ ಕುರಿತು ಸಚಿವ ಮಂಗಲ್ ಪ್ರಭಾತ ಲೋಧಾ ಅವರು ಪೊಲೀಸ್ ಆಯುಕ್ತ ದೇವೇನ ಭಾರತಿ ಅವರಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ನುಸುಳುವಿಕೆಗೆ ಶಾಸಕ ಅಸ್ಲಂ ಶೇಖ್ ಅವರ ಬೆಂಬಲ ! – ಮಂಗಲ್ ಪ್ರಭಾತ ಲೋಧಾ, ಕೌಶಲ್ಯ ಅಭಿವೃದ್ಧಿ ಸಚಿವ

ಹೀಗಾದರೆ, ನುಸುಳುಕೋರರಿಗೆ ಬೆಂಬಲ ನೀಡುವವರನ್ನು ದೇಶದ ಶತ್ರುಗಳು ಎಂದು ಘೋಷಿಸಿ, ಅವರ ಮೇಲೆಯೂ ಏಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ? ಇದು ಜನರಿಗೆ ತಿಳಿಯಬೇಕು !

ಮಾಲ್ವಣಿಯಲ್ಲಿ ಕೆಡವಲಾದ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರ ಕಟ್ಟಡವನ್ನು ಮತ್ತೆ ನಿರ್ಮಿಸಲು ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಅವರು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಆಡಳಿತದಲ್ಲಿರುವ ಕೆಲವು ಹಿರಿಯ ಅಧಿಕಾರಿಗಳು ಸಹ ಇದಕ್ಕಾಗಿ ಅಸ್ಲಂ ಶೇಖ್ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ಪಡೆದು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಂಗಲ ಪ್ರಭಾತ ಲೋಧಾ ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ದೇಶದಲ್ಲಿ ನುಸುಳುಕೋರರ ಸಂಖ್ಯೆ ವಿಪರೀತ ಹೆಚ್ಚಾಗಿದ್ದು, ಈಗ ಅವರು ಬೆದರಿಕೆ ಹಾಕಲು ಆರಂಭಿಸಿದ್ದಾರೆ. ನಾಳೆ ಅವರು ಮಾರಣಾಂತಿಕ ದಾಳಿ ಮತ್ತು ಗಲಭೆಗಳನ್ನು ಮಾಡುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ ! ಸ್ವಾತಂತ್ರ್ಯ ಬಂದು ೭೮ ವರ್ಷಗಳ ನಂತರವೂ ಭಾರತ ನುಸುಳುಕೋರರ ತಾಣವಾಗಿರುವುದು, ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !
  • ಅಮೆರಿಕಾದಂತೆ ಕಠಿಣ ಕ್ರಮ ಕೈಗೊಂಡು ಎಲ್ಲಾ ನುಸುಳುಕೋರರನ್ನು ತಕ್ಷಣ ಹೊರಹಾಕಲು ಸರಕಾರ ಮತ್ತು ಆಡಳಿತಕ್ಕೆ ಏಕೆ ಸಾಧ್ಯವಾಗುತ್ತಿಲ್ಲ ?
  • ಹಿಂದೂಗಳೇ, ನಿಮ್ಮ ತೆರಿಗೆ ಹಣದಿಂದ ಪೋಷಿಸಲ್ಪಡುತ್ತಿರುವ ಈ ನುಸುಳುಕೋರರ ಪರಾವಲಂಬಿಗಳು ನಿಮ್ಮ ಸುತ್ತಮುತ್ತಲು ಇಲ್ಲಾ ಅಲ್ಲವೇ ? ಎಚ್ಚರಿಕೆಯಿಂದ ಗಮನಿಸಿ ಮತ್ತು ಪೊಲೀಸರಿಗೆ ದೂರು ನೀಡಿ !