|

ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ನವಲೆ ಸೇತುವೆ ಪ್ರದೇಶದಲ್ಲಿ ನವೆಂಬರ್ ೧೩ ರಂದು ಸಂಜೆ ೫.೪೦ ಕ್ಕೆ ಕಂಟೇನರ್ನ (ಭಾರೀ ಸರಕು ಸಾಗಣೆ ವಾಹನ) ಬ್ರೇಕ್ ವೈಫಲ್ಯದಿಂದಾಗಿ ಭಾರಿ ಅಪಘಾತ ಸಂಭವಿಸಿದೆ. ಎರಡು ಕಂಟೇನರ್ ಮತ್ತು ಒಂದು ಕಾರಿನ ನಡುವೆ ನಡೆದ ಈ ಅಪಘಾತದಲ್ಲಿ ೮ ಜನರು ಸುಟ್ಟು ಕರಕಲಾಗಿದ್ದು, ೨೦ ರಿಂದ ೨೨ ಜನರಿಗೆ ಗಾಯಗಳಾಗಿವೆ. ಮೃತರ ಪೈಕಿ ೩ ವರ್ಷದ ಬಾಲಕಿ ಸೇರಿದಂತೆ ೬ ಜನರ ಗುರುತುಗಳು ಪತ್ತೆಯಾಗಿವೆ. ಈ ಅಪಘಾತದ ನಂತರ ನವೆಂಬರ್ ೧೪ ರಂದು ಬೆಳಿಗ್ಗೆ ಸಂಸದರು ಮತ್ತು ಕೇಂದ್ರ ರಾಜ್ಯ ಸಚಿವ ಮುರಳೀಧರ ಮೋಹೋಳ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಖಡಕ್ವಾಸ್ಲಾ ಕ್ಷೇತ್ರದ ಶಾಸಕ ಭೀಮರಾವ್ ತಾಪಕೀರ್, ಪುಣೆ ಮಹಾನಗರ ಪಾಲಿಕೆಯ ಆಯುಕ್ತ ನವಲಕಿಶೋರ್ ರಾಮ್, ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಜಯ್ ಕದಂ ಮುಂತಾದವರು ಉಪಸ್ಥಿತರಿದ್ದರು.
🚨 Major Accident Near Pune’s Navale Bridge
A horrific crash triggered a massive blast after a container’s brakes failed, ramming into 15–20 vehicles.
🔥 Preliminary Update:
• 8 people burnt to death
• 22 injured
• Fuel tank explosion set two vehicles ablaze🛑 Urgent need… pic.twitter.com/Gp680AuGUA
— Sanatan Prabhat (@SanatanPrabhat) November 14, 2025
ಕಾತ್ರಜ್ ಸುರಂಗದಿಂದ ನವಲೆ ಸೇತುವೆಯ ಕಡೆಗೆ ಬರುತ್ತಿದ್ದ ಕಂಟೇನರ್ ಟ್ರಕ್ ನ ಬ್ರೇಕ್ ವೈಫಲ್ಯದಿಂದಾಗಿ ರಸ್ತೆಯಲ್ಲಿದ್ದ ೧೫ ರಿಂದ ೨೦ ವಾಹನಗಳಿಗೆ ಟ್ರಕ್ ಭಾರಿ ಡಿಕ್ಕಿ ಹೊಡೆದಿದೆ. ಒಂದು ‘ಟ್ರಾವೆಲರ್’ ವಾಹನವು ಪಲ್ಟಿಯಾಗಿ ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಂಟೇನರ್ ಟ್ರಕ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಸಿಎನ್ಜಿ ಸಿಲಿಂಡರ್ ಸ್ಫೋಟಗೊಂಡಿತು ಹಾಗೂ ಕಾರಿನಲ್ಲಿದ್ದ ೫ ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ನಂತರ ಕಂಟೇನರ್ನ ಇಂಧನ ಟ್ಯಾಂಕ್ಗೆ ಬೆಂಕಿ ಹೊತ್ತಿಕೊಂಡಿತು. ಕಂಟೇನರ್ನ ಚಾಲಕ ಮತ್ತು ಅವನ ಸಹಾಯಕ ಕೂಡ ಸುಟ್ಟು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ಹೆದ್ದಾರಿಯಲ್ಲಿನ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿತು. ರಕ್ಷಣಾ ತಂಡಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಅಲ್ಪಾವಧಿ ಪರಿಹಾರಗಳ ಕುರಿತು ನವೆಂಬರ್ ೧೫ ರಂದು ಸಭೆ, ನರ್ಹೆದಿಂದ ರಾವೇತ್ ಎಲಿವೇಟೆಡ್ ರಸ್ತೆಗೂ ಪ್ರಯತ್ನ – ಸಂಸದ ಮೋಹೋಳ
ಈ ಅಪಘಾತವು ಅತ್ಯಂತ ದುರದೃಷ್ಟಕರವಾಗಿದೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ತಡೆಯಲು ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಅಲ್ಪಾವಧಿ ಪರಿಹಾರಗಳ ಕುರಿತು ನವೆಂಬರ್ ೧೫ ರಂದು ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಲಾಗುವುದು, ಮತ್ತು ‘ನರ್ಹೆ – ಸುತಾರ್ವಾಡಿ – ರಾವೇತ್’ ಎಲಿವೇಟೆಡ್ ರಸ್ತೆಯ ವಿಸ್ತೃತ ಯೋಜನಾ ವರದಿ ಅನುಮೋದನೆಯಾಗಿದ್ದು, ಅದಕ್ಕೆ ವೇಗ ನೀಡಲು ಕೇಂದ್ರ ಸಚಿವ ನಿತಿನ್ ಗಡಕರಿ ಅವರೊಂದಿಗೆ ಪ್ರಯತ್ನಿಸಲಾಗುವುದು ಎಂದು ಪುಣೆಯ ಸಂಸದರು ಮತ್ತು ಕೇಂದ್ರ ರಾಜ್ಯ ಸಚಿವ ಮುರಳೀಧರ ಮೋಹೋಳ ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!