
ರಾಯಗಡ, ನವೆಂಬರ್ 13 (ವರದಿ) – ತರಗತಿಯಲ್ಲಿ ‘ಜೈ ಶ್ರೀರಾಮ್’ ಎಂದಿದಕ್ಕೆ, ರಾಯಗಡ ಜಿಲ್ಲೆಯ ಪೆಣ್ನಲ್ಲಿರುವ ‘ನ್ಯೂ ಇಂಗ್ಲಿಷ್ ಸ್ಕೂಲ್, ಜೋಹೆ’ ಶಾಲೆಯ 8 ನೇ ತರಗತಿಯಲ್ಲಿ ಓದುತ್ತಿದ್ದ ಹಿಂದೂ ವಿದ್ಯಾರ್ಥಿಗೆ ಜಮೀರ್ ಕುತುಬುದ್ದೀನ್ ಮೊಮಿನ್ ಎಂಬ ಶಿಕ್ಷಕನು ಅಮಾನುಷವಾಗಿ ಥಳಿಸಿದ್ದಾನೆ. ಈ ಘಟನೆಯ ನಂತರ, ಸ್ಥಳೀಯ ಹಿಂದೂ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗಿ ಮತಾಂಧ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಈ ಪ್ರಕರಣದಲ್ಲಿ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ದಾದರ್ ಸಾಗರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮತಾಂಧ ಜಮೀರ್ ಮೊಮಿನ್ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ನವೆಂಬರ್ 11 ರಂದು ಸಂಭವಿಸಿದೆ.
‘ನ್ಯೂ ಇಂಗ್ಲಿಷ್ ಸ್ಕೂಲ್, ಜೋಹೆ’ ಶಾಲೆಯು ಕೊಲ್ಲಾಪುರದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ ನಡೆಸಲ್ಪಡುತ್ತದೆ. ನವೆಂಬರ್ 11 ರಂದು, ಪೆಣ್ ನಿವಾಸಿಯಾದ ಭಾನುದಾಸ್ ಪಾಟೀಲ್ ಅವರ ಮಗ ತರಗತಿಯಲ್ಲಿ ಇದ್ದಾಗ ಜಮೀರ್ ಕುತುಬುದ್ದೀನ್ ಮೊಮಿನ್ ತರಗತಿಗೆ ಬಂದು ತರಗತಿಯಲ್ಲಿ ತಮ್ಮ ಮೊಬೈಲ್ ಫೋನ್ ನೋಡುತ್ತಿರುವಾಗ, ತರಗತಿಯ ಮಕ್ಕಳಲ್ಲಿ ಯಾರೋ ‘ಜೈ ಶ್ರೀರಾಮ್’ ಎಂದು ಹೇಳಿದರು. ಭಾನುದಾಸ್ ಪಾಟೀಲ್ ಅವರ ಮಗನೇ ‘ಜೈ ಶ್ರೀರಾಮ್’ ಎಂದು ಜಯಘೋಷ ಮಾಡಿದನೆಂದು ತಿಳಿದು ಜಮೀರ್ ಮೊಮಿನ್ ಅವರು ಆ ಮಗುವಿಗೆ ಮುಷ್ಟಿಯಿಂದ ಅಮಾನುಷವಾಗಿ ಥಳಿಸಿದರು. ಈ ಥಳಿತದಿಂದ ಭಾನುದಾಸ್ ಪಾಟೀಲ್ ಅವರ ಮಗನ ಶರ್ಟ್ ಮತ್ತು ಪ್ಯಾಂಟ್ ಹರಿದುಹೋಯಿತು. ಶಾಲೆಯಲ್ಲಿ ನಡೆದ ಥಳಿತದ ಘಟನೆಯನ್ನು ವಿದ್ಯಾರ್ಥಿಯು ಪೋಷಕರಿಗೆ ತಿಳಿಸಿದನು. ಅದರ ನಂತರ, ಭಾನುದಾಸ್ ಪಾಟೀಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!