ಯುಪಿಯಲ್ಲಿ ಗೋ ಕಳ್ಳ ಸಾಗಾಣಿಕೆದಾರ ಹಸೀನ್ ಎನ್ಕೌಂಟರ್‌ನಲ್ಲಿ Cow Smuggler Encountered

  • ಆರೋಪಿಯ ಮೇಲಿತ್ತು 50 ಸಾವಿರ ರೂಪಾಯಿ ಬಹುಮಾನ

  • 24 ಕ್ಕೂ ಹೆಚ್ಚು ಪ್ರಕರಣಗಳು ದಾಖಲು

ಹಾಪುರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ನವೆಂಬರ್ 10 ರ ಮುಂಜಾನೆ ಪೊಲೀಸ ಮತ್ತು ಗೋ ಕಳ್ಳಸಾಗಾಣಿಕೆದಾರರ ನಡುವೆ ನಡೆದ ಚಕಮಕಿಯಲ್ಲಿ ಆರೋಪಿ ಹಸೀನ ಸತ್ತನು. ಪೊಲೀಸರಿಗೆ ಕೆಲವು ಗೋ ಕಳ್ಳ ಸಾಗಾಣಿಕೆದಾರರು ಗೋವುಗಳ ಕಳ್ಳಸಾಗಣೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸ್ ತಂಡವು ಪ್ರದೇಶವನ್ನು ಸುತ್ತುವರಿಯಿತು. ಪೊಲೀಸರನ್ನು ನೋಡಿದ ಕೂಡಲೇ ಹಸೀನ ಗುಂಡು ಹಾರಿಸಲು ಪ್ರಾರಂಭಿಸಿದನು. ಪೊಲೀಸರು ಪ್ರತ್ಯುತ್ತರವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡನು. ತಕ್ಷಣವೇ ಆತನನ್ನು ಧೌಲಾನಾದ ಗ್ರಾಮೀಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನು ಮೃತಪಟ್ಟನು.

ಹಸೀನ ಸಂಬಲ್ ಜಿಲ್ಲೆಯ ಮೈನೋಟಾ ಗ್ರಾಮದ ನಿವಾಸಿಯಾಗಿದ್ದನು. ಆತ ಕುಖ್ಯಾತ ಅಪರಾಧಿಯಾಗಿದ್ದನು. ಆತನ ವಿರುದ್ಧ ಕೊಲೆ, ಗ್ಯಾಂಗ್‌ ವಾರ್, ಗೋಹತ್ಯೆ ಇತ್ಯಾದಿ ಪ್ರಕರಣಗಳಲ್ಲಿ 24 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದವು. ಆತನ ಬಂಧನಕ್ಕಾಗಿ 50 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಮಾತ್ರ ಗೋ ಕಳ್ಳಸಾಗಾಣಿಕೆದಾರರ ವಿರುದ್ಧ ಇಂತಹ ಕಠಿಣ ಕ್ರಮ ಜರುಗುತ್ತದೆ ಎಂಬುದನ್ನು ಗಮನಿಸಬೇಕು!