‘ಭಾರತದ ವಿಭಜನೆಯಾಗದಿದ್ದರೆ, ಭಾರತದಲ್ಲಿ ಮುಸಲ್ಮಾನ ಪ್ರಧಾನಿಯೊಬ್ಬರು ಆಗುತ್ತಿದ್ದರಂತೆ!

ಸಂಭಲ (ಉತ್ತರಪ್ರದೇಶ) ಇಲ್ಲಿನ ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮಹಮೂದ್ ಅವರ ಹೇಳಿಕೆ

ಸಂಭಲ (ಉತ್ತರಪ್ರದೇಶ) – ಭಾರತದ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಗದೇ ಇದ್ದಿದ್ದರೆ, ಭಾರತದಲ್ಲಿಯೂ ಒಬ್ಬ ಮುಸಲ್ಮಾನ ಪ್ರಧಾನಿ ಆಗುತ್ತಿದ್ದರು. ಪ್ರಸ್ತುತ ಭಾರತದಲ್ಲಿ ಸುಮಾರು 30 ರಿಂದ 32 ಕೋಟಿ ಮುಸಲ್ಮಾನರಿದ್ದಾರೆ; ಆದರೆ ನಾವು ಎಂದಿಗೂ ಪ್ರಧಾನಿಯಾಗಬಹುದು ಎಂದು ಯೋಚಿಸಲೂ ಸಾಧ್ಯವಿಲ್ಲ ಎಂದು ಇಲ್ಲಿನ ಸಮಾಜವಾದಿ ಪಕ್ಷದ ಸತತ 7 ಬಾರಿ ಚುನಾಯಿತರಾದ ಶಾಸಕ ಇಕ್ಬಾಲ್ ಮಹಮೂದ ಅವರು ಹೇಳಿಕೆ ನೀಡಿದ್ದಾರೆ.

ವಿಭಜನೆಯ ದಿನದ ಬಗ್ಗೆ ನಾವು ಪಶ್ಚಾತ್ತಾಪ ಪಡುತ್ತೇವೆ! – ಶಾಸಕ ಇಕ್ಬಾಲ್ ಮಹಮೂದ

ಶಾಸಕ ಮಹಮೂದ ಅವರು ಮಾತು ಮುಂದುವರಿಸಿ, ದೇಶ ಸ್ವತಂತ್ರವಾದಾಗ ಮಹಮ್ಮದ್ ಅಲಿ ಜಿನ್ನಾ ಅವರು ಭಾರತದ ವಿಭಜನೆ ಮಾಡಿದರು. ಯಾರಿಗೆ ಭಾರತದ ಮೇಲೆ ಪ್ರೀತಿಯಿತ್ತೋ, ಅವರು ಇಲ್ಲೇ ಉಳಿದರು ಮತ್ತು ಯಾರಿಗೆ ಜಿನ್ನಾ ಅವರೊಂದಿಗೆ ಸಂಬಂಧ ಬೆಳೆಸಬೇಕಿತ್ತೋ ಅವರು ಪಾಕಿಸ್ತಾನಕ್ಕೆ ಹೋದರು. ನಾವು ಆ ದಿನವನ್ನು ದೂಷಿಸುತ್ತೇವೆ; ಏಕೆಂದರೆ ಇಂದು ನಮ್ಮ ಪರಿಸ್ಥಿತಿ ಈಗಿನಂತೆ ಇರುತ್ತಿರಲಿಲ್ಲ. ಒಂದು ವೇಳೆ ಪಾಕಿಸ್ತಾನವು ಪ್ರತ್ಯೇಕವಾಗದೇ ಇದ್ದಿದ್ದರೆ, ನಾವೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗುತ್ತಿದ್ದೆವು ಮತ್ತು ನಮ್ಮ ಸಮುದಾಯದಿಂದಲೂ ಪ್ರಧಾನಿಗಳು ಆಗುತ್ತಿದ್ದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಭಾರತದ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಲಿ ಎಂದಿಗೂ ಹಿಂದೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ, ಇದು ವಾಸ್ತವ ಸಂಗತಿ. ಇಂತಹ ಸಮಯದಲ್ಲಿ ಮುಸಲ್ಮಾನರಿಗೆ ಮಾತ್ರ ಪ್ರಧಾನಿ ಹುದ್ದೆಯ ಕನಸು ಬೀಳುತ್ತಿದೆ ಎಂಬುದನ್ನು ಗಮನಿಸಬೇಕು!
  • ಪ್ರಧಾನಿ ಹುದ್ದೆಯಿಂದ ಮಾತ್ರವಲ್ಲ, ಬದಲಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸಲ್ಮಾನರ ಸ್ಥಿತಿಯನ್ನು ನೋಡಿ ಈಗ ಮುಸಲ್ಮಾನರಿಗೆ ಭಾರತದ ಮಹತ್ವ ಅರ್ಥವಾಗುತ್ತಿದೆ ಮತ್ತು ಅದರಿಂದಲೇ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ!
  • ಒಂದು ವೇಳೆ ವಿಭಜನೆಯಾಗದೇ ಇದ್ದಿದ್ದರೆ, ಅಖಂಡ ಭಾರತ ನಿರ್ಮಾಣವಾಗಿ ಹಿಂದೂಗಳೇ ಪ್ರಧಾನಿಯಾಗುತ್ತಿದ್ದರು ಎಂಬುದನ್ನು ಗಮನದಲ್ಲಿಡಬೇಕು!