
ಬೆಂಗಳೂರು – ರಾಜ್ಯದ ಅತಿ ದೊಡ್ಡ ಕಾರಾಗೃಹಗಳಲ್ಲಿ ಒಂದಾದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ, ಅತ್ಯಾಚಾರ ಪ್ರಕರಣದ ಕೈದಿ ಹಾಗೂ ಇತರ ಕೆಲವು ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಟಿವಿಯಂತಹ ವಿಶೇಷ ಸೌಲಭ್ಯಗಳು ಲಭ್ಯವಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
💣 Terrorists Turned VIPs Behind Bars?
ISIS terrorist & rape convict in Bengaluru prison caught using mobiles, TV, chargers & even a hot box
13 phones seized! Jail officers complicit; must face punishment.
How can crime end when prisons pamper criminals?
Video Courtesy:… pic.twitter.com/AWY4PCF77R
— Sanatan Prabhat (@SanatanPrabhat) November 10, 2025
೧. ಈ ಜೈಲಿನಲ್ಲಿ ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕ ಶಕೀಲ್, ಕಾಮುಕ ಉಮೇಶ್ ರೆಡ್ಡಿ, ಚಿನ್ನದ ಸರ ಕಳ್ಳಸಾಗಣೆ ಪ್ರಕರಣದ ಆರೋಪಿ, ಪ್ರಸಿದ್ಧ ಹೋಟೆಲ್ ಉದ್ಯಮಿಯ ಮೊಮ್ಮಗ ಮತ್ತು ನಟ ತರುಣ್ ಕೊಂಡರಾಜು ಅವರು ಈ ಸೌಲಭ್ಯಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಜೈಲು ಆಡಳಿತದ ಮೇಲೆ ತೀವ್ರ ಟೀಕೆ ವ್ಯಕ್ತವಾಗಿದೆ.
೨. ಒಂದು ವಿಡಿಯೋದಲ್ಲಿ ೧೩ ಮೊಬೈಲ್ ಫೋನ್ಗಳು, ಇಯರ್ಫೋನ್ಗಳು ಮತ್ತು ಚಾರ್ಜರ್ಗಳು ಕಂಡಿವೆ. ಅತ್ಯಾಚಾರ ಪ್ರಕರಣದ ಉಮೇಶ್ ರೆಡ್ಡಿ ಅವರ ಕೋಣೆಯಲ್ಲಿ ‘ಹಾಟ್ ಬಾಕ್ಸ್’ (ಬಿಸಿ ಆಹಾರ ಇಡಲು ಬಳಸುವ ಬಾಕ್ಸ್) ಕೂಡ ಪತ್ತೆಯಾಗಿದೆ.
೩. ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ ತೂಗುದೀಪ, ಅವರ ಸಹಚರರಾದ ವಿಲ್ಸನ್ ಗಾರ್ಡನ್ ನಾಗರಾಜ್ ಮತ್ತು ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ ಎಂಬ ರೌಡಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾದ ಫೋಟೋಗಳು ಮತ್ತು ವಿಡಿಯೋಗಳು ಸಹ ಸಾರ್ವಜನಿಕಗೊಂಡಿದ್ದವು. ಈ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಕೂಡ ಟೀಕೆ ಮಾಡಿತ್ತು. ಈಗ ಮತ್ತೆ ಈ ಘಟನೆ ಬೆಳಕಿಗೆ ಬಂದಿರುವುದು ಜೈಲು ಆಡಳಿತ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಚಿಹ್ನೆಯನ್ನು ಮೂಡಿಸಿದೆ.
೪. ಭಯೋತ್ಪಾದಕ ಶಕೀಲ್ ಮನ್ನಾನನ್ನು ೨೦೨೦ ರಲ್ಲಿ ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿದ ನಂತರ ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿತ್ತು. ಅಂದಿನಿಂದ ಶಕೀಲ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಕೋಣೆಯಲ್ಲಿದ್ದಾನೆ. ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಉಮೇಶ್ ರೆಡ್ಡಿ ಹಲವಾರು ದಶಕಗಳಿಂದ ಜೈಲಿನಲ್ಲಿದ್ದಾನೆ. ಮಾರ್ಚ್ ತಿಂಗಳಲ್ಲಿ ವಿದೇಶದಿಂದ ಚಿನ್ನದ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ತರುಣ್ ಕೊಂಡರಾಜುನನ್ನು ಬಂಧಿಸಲಾಗಿತ್ತು. ಈ ಮೂವರು ಸಹ ಇದೇ ಕೋಣೆಯಲ್ಲಿ ಇದ್ದಾರೆ.
೫. ವಿಡಿಯೋದಲ್ಲಿ ಈ ಕೈದಿಗಳು ಇತರ ಕೈದಿಗಳೊಂದಿಗೆ ಜೈಲಿನಲ್ಲಿ ಯಾವುದೇ ಭಯವಿಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಹಾಗೆಯೇ, ಶಕೀಲ್, ಉಮೇಶ್ ಮತ್ತು ತರುಣ್ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಮಾಡಿದ ‘ವಿಡಿಯೋ ಕರೆಗಳು’ ಸಹ ಬಹಿರಂಗಗೊಂಡಿವೆ.
೬. ಜೈಲಿನ ಕೈದಿಗಳ ಐಷಾರಾಮಿ ಜೀವನದ ಬಗ್ಗೆ ಬಹಿರಂಗಗೊಂಡ ‘ವಿಡಿಯೋ’ದ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಲು, ಆ ದಿನದ ವಾರ್ತಾಪತ್ರಿಕೆಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವಿಡಿಯೋದಲ್ಲಿ ತೋರಿಸಲಾದ ಇಂಗ್ಲಿಷ್ ವಾರ್ತಾಪತ್ರಿಕೆಯು ೨೦೨೨ ನೇ ಇಸವಿಯದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರೀಕರಿಸಿದ ಇತರ ಕೆಲವು ವಿಡಿಯೋಗಳೂ ಸಹ ಪ್ರಸಾರವಾಗಿವೆ ಎಂದು ತಿಳಿದುಬಂದಿದೆ. ವಿಡಿಯೋವನ್ನು ಬಹಿರಂಗಗೊಳಿಸಿದ ಮೂಲಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ತನಿಖೆ ನಡೆಸುತ್ತಿದೆ.
ತನಿಖೆ ನಡೆಸಿ ವರದಿ ಸಲ್ಲಿಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಆದೇಶ

ಜೈಲಿನಲ್ಲಿ ನಡೆದ ಈ ಘಟನೆಯ ವಿಡಿಯೋಗಳು ಬಯಲಿಗೆ ಬಂದ ನಂತರ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ. ದಯಾನಂದ್ ಅವರು ವಿವರಣೆ ಕೇಳಿದ್ದಾರೆ. ಈ ದುರ್ನಡತೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದಕ್ಷಿಣ ವಿಭಾಗದ ಪೊಲೀಸ್ ಉಪ ಮಹಾನಿರೀಕ್ಷಕ ದಿವ್ಯಾಶ್ರೀ ಅವರಿಗೆ ಸೂಚನೆ ನೀಡಿದ್ದಾರೆ.
ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು! – ಗೃಹ ಸಚಿವ ಪರಮೇಶ್ವರ

ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಯಾನಂದ್ ಅವರಿಂದ ವರದಿ ಕೇಳಿದ್ದೇನೆ ಎಂದು ಕರ್ನಾಟಕ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ. ನಾನೇ ಖುದ್ದಾಗಿ ಅಧಿಕಾರಿಗಳ ಸಭೆಯನ್ನು ಕರೆಯುತ್ತೇನೆ. ದಯಾನಂದ್ ಅವರು ವರದಿ ನೀಡಿದ ನಂತರ ನಾವು ಅದನ್ನು ಪರಿಶೀಲಿಸುತ್ತೇವೆ. ವರದಿಯಿಂದ ನಮಗೆ ತೃಪ್ತಿಯಾಗದಿದ್ದರೆ, ನಾವು ಉನ್ನತ ಮಟ್ಟದ ತನಿಖೆಯನ್ನು ನಡೆಸುತ್ತೇವೆ. ನಾವು ತನಿಖೆಗಾಗಿ ಸಮಿತಿಯನ್ನು ರಚಿಸುತ್ತೇವೆ. ಜೈಲಿನ ಈ ವಿಡಿಯೋ ಹಳೆಯದು. ಈ ಹಿಂದೆಯೂ ಹಳೆಯ ವಿಡಿಯೋ ಪ್ರಸಾರವಾಗಿತ್ತು. ಏನೇ ಆಗಲಿ, ಇಂತಹ ಘಟನೆಗಳು ನಡೆಯಬಾರದು. ಇದರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!