ಮುಂಬಯಿಯಲ್ಲಿ ನಡೆಯಲಿರುವ ‘ಸನ್‌ಬರ್ನ್’ ಉತ್ಸವದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು – Sun Burn Drug Abuse

ಮಹಾರಾಷ್ಟ್ರದಲ್ಲಿ ಮಾದಕವಸ್ತುಗಳ ವೈಭವೀಕರಣ ಬೇಡ ! – ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನ

ಮುಂಬಯಿ – ಮಾದಕವಸ್ತು ಮಾರಾಟ ಮತ್ತು ಸೇವನೆಯಿಂದಾಗಿ ಗೋವಾ ರಾಜ್ಯದಲ್ಲಿ ಕುಖ್ಯಾತಿ ಗಳಿಸಿದ ‘ಸನ್‌ ಬರ್ನ್’ ಉತ್ಸವವು ಡಿಸೆಂಬರ್ ತಿಂಗಳಲ್ಲಿ ಮುಂಬಯಿಯಲ್ಲಿ ನಡೆಯಲಿದೆ. ಗೋವಾದಲ್ಲಿ ನಡೆದ ಸನ್‌ಬರ್ನ್ ಉತ್ಸವದಲ್ಲಿ ಒಬ್ಬ ಯುವತಿ ಮೃತಪಟ್ಟಿದ್ದಳು, ಅಲ್ಲದೆ ಮಾದಕವಸ್ತುಗಳ ವಿತರಕನನ್ನು  ವಸ್ತುಗಳೊಂದಿಗೆ ಬಂಧಿಸಲಾಗಿತ್ತು. ಇಂತಹ ಗಂಭೀರ ಪ್ರಕರಣಗಳು ನಡೆದಿದ್ದರೂ ಸಹ ಮುಂಬಯಿಯಲ್ಲಿ ಸನ್‌ಬರ್ನ್ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಮಾದಕ ವಸ್ತುಗಳ ಅಡ್ಡೆಯಾಗಿರುವ ಈ ಉತ್ಸವಕ್ಕೆ ಅನುಮತಿ ನಿರಾಕರಿಸಬೇಕು ಎಂದು ‘ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನ’ವು ಮುಂಬಯಿಯ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿದೆ. ನವೆಂಬರ್ 3 ರಂದು ಜಿಲ್ಲಾಧಿಕಾರಿ ಆಚಲ ಸೂದ ಗೋಯಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಿಠಿಬಾಯಿ ಕಾಲೇಜಿನ ಪ್ರಾಧ್ಯಾಪಕ ಶ್ರೀಪಾದ ಸಾಮಂತ, ವಾಂದ್ರೆಯ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಲಕ್ಷ್ಮಣ ಜಠಾರ ಹಾಗೂ ಶ್ರೀಯುತರಾದ ಪ್ರಭಾಕರ ಭೋಸಲೆ, ವಿನಾಯಕ ಶಿಂದೆ, ಸುಭಾಷ ಅಹಿರ, ವಿಲಾಸ ನಿಕಮ, ಸಾಗರ ಚೋಪದಾರ, ಸತೀಶ ಸೋನಾರ, ಸೌ. ಧನಶ್ರೀ ಕೇಳಶೀಕರ ಮೊದಲಾದವರು ಉಪಸ್ಥಿತರಿದ್ದರು. ಮುಂಬಯಿ ಸಹ ಪೊಲೀಸ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಸತ್ಯನಾರಾಯಣ ಚೌಧರಿ, ಹೆಚ್ಚುವರಿ ಪೊಲೀಸ್ ಆಯುಕ್ತರು ಅಭಿಮನ್ಯು ದೇಶಮುಖ, ‘ಮುಂಬಯಿ ಪೋರ್ಟ್ ಟ್ರಸ್ಟ್’ನ ಎಸ್ಟೇಟ್ ಮ್ಯಾನೇಜರ ಶಿರಸಾಟ ಅವರನ್ನು ಸಹ  ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನದ ಮೂಲಕ ಭೇಟಿ ಮಾಡಲಾಯಿತು. ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತರಿಗೂ ಈ ವಿಷಯಕ್ಕೆ ಸಂಬಂಧಿಸಿದ ಮನವಿಯನ್ನು ಮಾದಕವಸ್ತು ವಿರೋಧಿ ಸಂಘರ್ಷ ಅಭಿಯಾನದ ವತಿಯಿಂದ ನೀಡಲಾಗಿದೆ.

ಸಂಪಾದಕೀಯ ನಿಲುವು

  • ಪಾಶ್ಚಿಮಾತ್ಯರನ್ನು ಅಂಧಾನುಕರಣೆ ಮಾಡಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ‘ಸನ್‌ಬರ್ನ್’ ವಿರುದ್ಧ ಮನವಿ ನೀಡುವ ಪರಿಸ್ಥಿತಿ ಏಕೆ ಬರುತ್ತದೆ? ಆಡಳಿತಕ್ಕೆ ಯುವ ಪೀಳಿಗೆಯ ಹಿತಾಸಕ್ತಿ ಅರ್ಥವಾಗುವುದಿಲ್ಲವೇ?
  • ರಾಷ್ಟ್ರಹಾನಿಯ ವಿರುದ್ಧ ಕ್ರಿಯಾಶೀಲರಾಗಿರುವ ‘ಮಾದಕ ವಸ್ತು ವಿರೋಧಿ ಸಂಘರ್ಷ ಅಭಿಯಾನ’ದ ಕಾರ್ಯಕರ್ತರಿಗೆ ಅಭಿನಂದನೆಗಳು!