ಕುಟುಂಬ ರಾಜಕಾರಣದ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಂದ ಟೀಕೆ

ನವದೆಹಲಿ – ಭಾರತದ ರಾಜಕಾರಣ ಈಗ ಕೌಟುಂಬಿಕ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ‘ಪ್ರಾಜೆಕ್ಟ್ ಸಿಂಡಿಕೇಟ್’ ಎಂಬ ಅಂತರರಾಷ್ಟ್ರೀಯ ಪ್ರಕಟಣೆಯಲ್ಲಿ ಬರೆದ ಲೇಖನದಲ್ಲಿ ಟೀಕಿಸಿದ್ದಾರೆ. ಎಲ್ಲಿಯವರೆಗೆ ರಾಜಕಾರಣವು ಕುಟುಂಬಗಳ ಸುತ್ತ ಸುತ್ತುತ್ತಿರುವುದೋ, ಅಲ್ಲಿಯ ವರೆಗೂ ಪ್ರಜಾಪ್ರಭುತ್ವದ ನಿಜವಾದ ಉದ್ದೇಶವು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ತರೂರ್ ಮಾತು ಮುಂದುವರೆಸಿ,
1. ಭಾರತವು ಕುಟುಂಬ ರಾಜಕಾರಣವನ್ನು ತ್ಯಜಿಸಿ ಗುಣಮಟ್ಟ-ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಮಯ ಬಂದಿದೆ. ಇದಕ್ಕಾಗಿ ಕಾನೂನುಬದ್ಧವಾಗಿ ನಿಗದಿಪಡಿಸಿದ ಹುದ್ದೆಗಳ ಷರತ್ತುಗಳು, ಪಕ್ಷದೊಳಗಿನ ಚುನಾವಣೆಗಳು ಮತ್ತು ಮತದಾರರ ಜಾಗೃತಿಯಂತಹ ಮೂಲಭೂತ ಸುಧಾರಣೆಗಳ ಅವಶ್ಯಕತೆಯಿದೆ.
2. ಗಾಂಧಿ-ನೆಹರೂ ಕುಟುಂಬದ ಪರಂಪರೆಯು ಸ್ವಾತಂತ್ರ್ಯ ಹೋರಾಟದೊಂದಿಗೆ ಸಂಬಂಧ ಹೊಂದಿದೆ; ಆದರೆ, ಇದರಿಂದಾಗಿ ರಾಜಕಾರಣವು ಕೆಲವು ಕುಟುಂಬಗಳ ಜನ್ಮಸಿದ್ಧ ಹಕ್ಕು ಎಂಬ ಅಭಿಪ್ರಾಯ ಮೂಡಿದೆ.
3. ಜಮ್ಮು ಮತ್ತು ಕಾಶ್ಮೀರದ ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳು ಸಹ ತಲೆಮಾರುಗಳಿಂದ ಅಧಿಕಾರವನ್ನು ಅನುಭವಿಸಿವೆ.
4. ಇದರೊಂದಿಗೆ, ಈ ಲೇಖನದಲ್ಲಿ ತರೂರ್ ಅವರು ಒಡಿಶಾದಲ್ಲಿ ನವೀನ್ ಪಟ್ನಾಯಕ್, ಮಹಾರಾಷ್ಟ್ರದಲ್ಲಿ ಉದ್ಧವ್ ಮತ್ತು ಆದಿತ್ಯ ಠಾಕ್ರೆ, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್, ಬಿಹಾರದಲ್ಲಿ ರಾಮವಿಲಾಸ್ ಮತ್ತು ಚಿರಾಗ್ ಪಾಸ್ವಾನ್, ಪಂಜಾಬ್ನಲ್ಲಿ ಪ್ರಕಾಶ್ ಸಿಂಗ್ ಮತ್ತು ಸುಖಬೀರ್ ಬಾದಲ್, ತೆಲಂಗಾಣದಲ್ಲಿ ಕೆ.ಸಿ.ಆರ್. ಅವರ ಪುತ್ರ ಮತ್ತು ಪುತ್ರಿ, ಹಾಗೂ ತಮಿಳುನಾಡಿನಲ್ಲಿ ಕರುಣಾನಿಧಿ ಮತ್ತು ಅವರ ಪುತ್ರ ಎಂ.ಕೆ. ಸ್ಟಾಲಿನ್ ಅವರ ಕುಟುಂಬಗಳಲ್ಲಿನ ಉತ್ತರಾಧಿಕಾರದ ಹೋರಾಟವನ್ನು ಉಲ್ಲೇಖಿಸಿದ್ದಾರೆ.
ತರೂರ್ ಅವರ ಮಾತು ಯೋಗ್ಯ ! – ಭಾಜಪ

ಭಾಜಪ ವಕ್ತಾರ ಶಹಜಾದ ಪೂನಾವಾಲಾ ಅವರು ಮಾತನಾಡಿ, ತರೂರ್ ಅವರು ಬಹಳ ಆಳವಾದ ಮನಸ್ಸಿನಿಂದ ಬರೆದಿದ್ದಾರೆ. ಅವರ ಹೇಳಿಕೆ ಗಾಂಧಿ ಕುಟುಂಬವು ಭಾರತೀಯ ರಾಜಕಾರಣವನ್ನು ಕೌಟುಂಬಿಕ ವ್ಯವಹಾರವಾಗಿ ಪರಿವರ್ತಿಸಿದೆ ಎಂಬುದು ಸಂಪೂರ್ಣವಾಗಿ ಸರಿಯಾಗಿದೆ. ತರೂರ್ ಈಗ ಅಪಾಯವನ್ನು ಎದುರಿಸುವ ನಾಯಕರಾಗಿದ್ದು, ಅವರು ತಮ್ಮದೇ ಪಕ್ಷದ ಕುಟುಂಬ ರಾಜಕಾರಣದ ಉತ್ತರಾಧಿಕಾರಿಯಾಗಿರುವ ರಾಹುಲ್ ಗಾಂಧಿ ಅವರ ಮೇಲೆ ನೇರವಾಗಿ ಮೌಖಿಕ ದಾಳಿ ಮಾಡುತ್ತಾರೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಕುಟುಂಬ ರಾಜಕಾರಣದಿಂದಾಗಿ ದೇಶವು ನಿಜವಾದ ಅರ್ಥದಲ್ಲಿ ಎಂದಿಗೂ ಪ್ರಗತಿ ಸಾಧಿಸಲಿಲ್ಲ, ಬದಲಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಹಾನಿಯಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಲೋಕಕಲ್ಯಾಣಕಾರಿ ಹಿಂದೂ ರಾಷ್ಟ್ರವೇ ಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!