|

ಸಾಂಗ್ಲಿ, ನವೆಂಬರ್ 1 – ಇಲ್ಲಿನ ‘ಸಿ ನ್ಯೂಸ್’ನ ಯೂಟ್ಯೂಬ್ ಸುದ್ದಿ ವಾಹಿನಿಯಲ್ಲಿ ಶಿವಾಜಿ ಪ್ರತಾಪಗಡದಲ್ಲಿ ಅಫಜಲ್ ಖಾನ್ ವಧೆಯ ಶಿಲ್ಪವನ್ನು ಸ್ಥಾಪಿಸುವ ಕುರಿತಾದ ಸುದ್ದಿಯನ್ನು ನೋಡಿ, ಹಿಂದೂ ಏಕತಾ ಆಂದೋಲನದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ. ನಿತಿನ ಶಿಂದೆ ಅವರನ್ನು ಮತಾಂಧ ಮುಸ್ತಫಾ ಮುಲಾಣಿ ಕೊಲ್ಲುವ ಬೆದರಿಕೆಯನ್ನು ಹಾಕಿದ್ದಾನೆ. ಈ ಸಂಬಂಧ ‘ಮತಾಂಧ ಮುಲಾಣಿಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹಿಂದೂ ಏಕತಾ ಆಂದೋಲನದ ಪದಾಧಿಕಾರಿಗಳು ಸಾಂಗ್ಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಏಕತಾ ಆಂದೋಲನದ ಮಿರಜ ನಗರಾಧ್ಯಕ್ಷ ಶ್ರೀ. ಸೋಮನಾಥ ಗೋಟಖಿಂಡೆ, ಕಾರ್ಯಕರ್ತರಾದ ಸರ್ವಶ್ರೀ ರಾಜು ಜಾಧವ, ಅವಧೂತ ಜಾಧವ, ಅನಿರುದ್ಧ ಕುಂಭಾರ, ಅರುಣ ವಾಘಮೋಡೆ, ಅರವಿಂದ ಯೇತನಾಳೆ, ಗಜಾನನ ಮಾನೆ, ಸುಮಿತ ಶಿಂಗೆ, ದಿಗ್ವಿಜಯ ಶಿಂದೆ, ಶುಭಂ ಗವಳಿ, ಅನಿಕೇತ ಆಂಬರುಳೆ, ಅನಿಕೇತ ಕುಂಬಾರ, ಶಾಂತಾರಾಮ ಶಿಂದೆ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಪಾದಕೀಯ ನಿಲುವುಮತಾಂಧರಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯವೇ ಉಳಿದಿಲ್ಲ, ಇದು ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರಕ್ಕೆ ಖೇದಕರ! ಇಂತಹ ಬೆದರಿಕೆ ಹಾಕಿದ ಮತಾಂಧನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು, ಇದು ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳ ಅಪೇಕ್ಷೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ