ಛತ್ತೀಸ್‌ಗಢದಲ್ಲಿ ೧೪೦ ಮುಸಲ್ಮಾನರಿಂದ ‘ಘರ್‌ವಾಪಸಿ’ !

(ಘರ್‌ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಪುನಃ ಪ್ರವೇಶ)

ಸಾರಂಗಢ (ಛತ್ತೀಸ್‌ಗಢ) – ಛತ್ತೀಸ್‌ಗಢ ರಾಜ್ಯದ ಸಾರಂಗಢದಲ್ಲಿ ಇತ್ತೀಚೆಗೆ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ೧೪೦ ಮುಸಲ್ಮಾನರು ಹಿಂದೂ ಧರ್ಮಕ್ಕೆ ಪುನಃ ಪ್ರವೇಶ ಪಡೆದರು. ಪ.ಪೂ. ಅಜಯ ಉಪಾಧ್ಯಾಯ ಅವರ ವಂದನಿಯ ಉಪಸ್ಥಿತಿಯಲ್ಲಿ ಈ ‘ಘರ್‌ವಾಪಸಿ’ ಕಾರ್ಯಕ್ರಮ ನಡೆಯಿತು. ಈ ಐತಿಹಾಸಿಕ ಸಂದರ್ಭದಲ್ಲಿ ‘ಅಖಿಲ ಭಾರತೀಯ ಘರ್‌ವಾಪಸಿ ಅಭಿಯಾನ’ದ ಪ್ರಮುಖ ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ್ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದರು. ಅವರು ಎಲ್ಲಾ ೧೪೦ ಮುಸಲ್ಮಾನ್ ಬಂಧುಗಳ ಕಾಲು ತೊಳೆದು ಸನಾತನ ಧರ್ಮಕ್ಕೆ ವಿಧಿವತ್ತಾಗಿ ಸ್ವಾಗತಿಸಿದರು.

೧. ಈ ಸಂದರ್ಭದಲ್ಲಿ ಶ್ರೀ. ಪ್ರಬಲ ಪ್ರತಾಪಸಿಂಗ ಜುದೇವ್ ಅವರು, “ಸನಾತನ ಧರ್ಮವು ಕೇವಲ ಶ್ರದ್ಧೆಯಲ್ಲ, ಬದಲಿಗೆ ಒಂದು ಅತ್ಯುತ್ತಮ ಜೀವನ ಪದ್ಧತಿಯಾಗಿದೆ. ಸನಾತನ ಧರ್ಮವು ಸಾಮರಸ್ಯ, ಪ್ರೀತಿ ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಕಲಿಸುತ್ತದೆ. ‘ಘರ್‌ವಾಪಸಿ’ ಎಂಬುದು ಕೇವಲ ಒಂದು ಅಭಿಯಾನವಲ್ಲ, ಅದು ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ” ಎಂದು ಹೇಳಿದರು.

೨. ಈ ಸಂದರ್ಭದಲ್ಲಿ ಛತ್ತೀಸ್‌ಗಢ ರಾಜ್ಯದ ‘ಘರ್‌ವಾಪಸಿ’ ಅಭಿಯಾನದ ಸಂಯೋಜಕಿ ಶ್ರೀಮತಿ ಅಂಜು ಗಬೇಲ್ ಅವರು, “ಛತ್ತೀಸ್‌ಗಢದ ಯುವಕರು ತಮ್ಮ ಧರ್ಮ ಮತ್ತು ಸಂಸ್ಕೃತಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆ ಇದೆ” ಎಂದು ತಿಳಿಸಿದರು.