ಮಾರುತಿಯ ಜನ್ಮಸ್ಥಾನವಿರುವ ಕರ್ನಾಟಕ ರಾಜ್ಯದ ರಾಜ್ಯೋತ್ಸವಕ್ಕೆ ಯೋಗಿ ಆದಿತ್ಯನಾಥರಿಂದ ಶುಭಾಶಯ

ಬೆಂಗಳೂರು – ಸಂಕಟಗಳನ್ನು ನಿವಾರಿಸುವ ಶ್ರೀ ಹನುಮಂತ ದೇವರ ಪವಿತ್ರ ಜನ್ಮಸ್ಥಳ, ಅಪೂರ್ವ ನೈಸರ್ಗಿಕ ಸೌಂದರ್ಯದಿಂದ ಕೂಡಿದ ನಾಡು, ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಮತ್ತು ಗೌರವಯುತ ಪರಂಪರೆಯನ್ನು ಉಳಿಸಿಕೊಂಡಿರುವ ಕರ್ನಾಟಕ ರಾಜ್ಯದ ಸ್ಥಾಪನಾದಿನದ ನಿಮಿತ್ತ ಸಮಸ್ತ ಕರ್ನಾಟಕದ ಜನರಿಗೆ ಶುಭಾಶಯಗಳು, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ.

ಈ ಪವಿತ್ರ ನಾಡು ಯಾವಾಗಲೂ ಸುಖ, ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯಿಂದ ಪ್ರಕಾಶಿಸಲಿ ಎಂದು ಮಾರುತಿನಂದನನಲ್ಲಿ ಪ್ರಾರ್ಥಿಸುತ್ತೇನೆ, ಎಂದೂ ಹೇಳಿದ್ದಾರೆ.