ಮಹಾರಾಷ್ಟ್ರ ಮತ್ತು ಇತರ ನಗರಗಳಲ್ಲಿ ಭಾರಿ ಭಯೋತ್ಪಾದಕ ದಾಳಿಯ ಸಂಚು!

ಪುಣೆ – ನಿಷೇಧಿತ ಭಯೋತ್ಪಾದಕ ಸಂಘಟನೆ ‘ಅಲ್-ಖೈದಾ’ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊಂದಿದ್ದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (‘ಎ.ಟಿ.ಎಸ್.’) ಕೊಂಡ್ವಾದಲ್ಲಿ ವಾಸಿಸುವ ಜುಬೇರ್ ಹಂಗರಗೇಕರ್ ಎಂಬ ಕಂಪ್ಯೂಟರ್ ಎಂಜಿನಿಯರ್ನನ್ನು ಬಂಧಿಸಿದೆ. ಚೆನ್ನೈನಿಂದ ಹಿಂತಿರುಗಿದ ಕೂಡಲೇ ಆತನನ್ನು ಪುಣೆ ರೈಲು ನಿಲ್ದಾಣದ ಆವರಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ, ಆತನ ಒಬ್ಬ ಸ್ನೇಹಿತನನ್ನೂ ಸಹ ಅನುಮಾನದ ಮೇರೆಗೆ ಪುಣೆ ರೈಲು ನಿಲ್ದಾಣದಿಂದ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಜುಬೇರ್ ಬಳಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನ ಭಾಷಣದ ಉರ್ದು ಅನುವಾದ ಕಂಡುಬಂದಿದೆ. ‘ಅಲ್ ಖೈದಾ ಇನ್ಸ್ಪೈರ್’ ಮ್ಯಾಗಜೀನ್ನಿಂದ ‘ಎಕೆ 47’ ರೈಫಲ್ನಿಂದ ಗುಂಡು ಹಾರಿಸುವ ಮತ್ತು ಬಾಂಬ್ ತಯಾರಿಸುವ ವಿಧಾನಗಳ ಚಿತ್ರಗಳು ಮತ್ತು ಮಾಹಿತಿ ದೊರೆತಿದೆ. ನ್ಯಾಯಾಲಯವು ಆತನನ್ನು ನವೆಂಬರ್ 4 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲು ಆದೇಶಿಸಿದೆ. ಜುಬೇರ್ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಮಹಾರಾಷ್ಟ್ರ ಹಾಗೂ ಇತರ ನಗರಗಳಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
🚨 Al-Qaeda-linked engineer arrested in Pune
🕵️♂️ ATS arrested Zuber Hangargekar from Kondhwa after return from Chennai
💣 Laden’s Urdu speech and Al-Qaeda Inspire manuals on AK47 use and bomb-making found
⚠️ Planned major terror attacks in Maharashtra and other Indian cities… pic.twitter.com/pNbfQlaR1J
— Sanatan Prabhat (@SanatanPrabhat) October 29, 2025
1. ಜುಬೇರ್ ಸಂಪರ್ಕದಲ್ಲಿ ಎಷ್ಟು ಕಟ್ಟರ ಯುವಕರಿದ್ದಾರೆ? ‘ಅಲ್-ಖೈದಾ’ ಸದಸ್ಯರಾಗಲು ಆತ ಬೇರೆ ಯಾರಿಗಾದರೂ ಮಾಹಿತಿ ನೀಡಿದ್ದಾನೆಯೇ? ಎಂಬ ಕುರಿತು ‘ಎ.ಟಿ.ಎಸ್.’ ತನಿಖೆ ನಡೆಸುತ್ತಿದೆ. ಜುಬೇರ್ ಮೂಲತಃ ಸೋಲಾಪುರದವನಾಗಿದ್ದು, ಉನ್ನತ ಶಿಕ್ಷಣ ಪಡೆದಿದ್ದಾನೆ. ಆತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾನೆ.
2. ಅಕ್ಟೋಬರ್ 9 ರಂದು ನಗರದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಯ ಸಮಯದಲ್ಲಿ 19 ಲ್ಯಾಪ್ಟಾಪ್ಗಳು ಮತ್ತು 40 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಸಮಯದಲ್ಲಿ ಜುಬೇರ್ ಹಂಗರಗೇಕರ್ನ ಲ್ಯಾಪ್ಟಾಪ್ನಲ್ಲಿ ‘ಅಲ್-ಖೈದಾ’ ಸಂಘಟನೆಗೆ ಸಂಬಂಧಿಸಿದ ಸಾಹಿತ್ಯ ‘ಡೌನ್ಲೋಡ್’ ಮಾಡಿರುವುದು ಕಂಡುಬಂದಿದೆ. ಅಂತಹ ಸಾಹಿತ್ಯವನ್ನು ‘ಡೌನ್ಲೋಡ್’ ಮಾಡುವುದು ಗಂಭೀರ ಅಪರಾಧ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಉಪಕರಣಗಳ ‘ಡಿಜಿಟಲ್ ಫೋರೆನ್ಸಿಕ್’ ತನಿಖೆ ಪ್ರಸ್ತುತ ನಡೆಯುತ್ತಿದ್ದು, ಇದರಿಂದ ಮತ್ತಷ್ಟು ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!