ಮಹಿಳಾ ರೈತರ ಅಪಮಾನ ಪ್ರಕರಣ : ಭಾಜಪ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಕೋರ್ಟ್‌ನಲ್ಲಿ ಕ್ಷಮೆ ಯಾಚನೆ !

ಭಟಿಂಡಾ (ಪಂಜಾಬ್) – ವೃದ್ಧ ಮಹಿಳಾ ರೈತರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದ ಕಾರಣ, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಭಾಜಪ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರು ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆ ಯಾಚಿಸಿದರು. ನ್ಯಾಯಾಲಯಕ್ಕೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ತಪ್ಪು ತಿಳುವಳಿಕೆ ಉಂಟಾಗಿದೆ. ಯಾರನ್ನೂ ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಹೇಳಿದರು.

೨೦೨೧ ರಲ್ಲಿ ದೆಹಲಿಯಲ್ಲಿ ನಡೆದ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ, ಕಂಗನಾ ಅವರು ಭಟಿಂಡಾದ ಬಹದ್ದೂರ್‌ಗಢ್ ಜಂಡಿಯಾ ಗ್ರಾಮದ ನಿವಾಸಿ ೮೭ ವರ್ಷದ ಮಹಿಳಾ ರೈತ ಮಹಿಂದರ್ ಕೌರ್ ಅವರನ್ನು ‘ಆಂದೋಲನದಲ್ಲಿ ಭಾಗವಹಿಸಲು ಪ್ರತಿಭೆಗೆ ₹೧೦೦ ಪಡೆಯುವ ಮಹಿಳೆ’ ಎಂದು ಬರೆದು ಪೋಸ್ಟ್ ಮಾಡಿದ್ದರು. ಮಹಿಂದರ್ ಕೌರ್ ಅವರು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.