ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಭಿವಂಡಿಯಲ್ಲಿ ‘ಉರ್ದು ಘರ್‌’ಗಾಗಿ ನಿವೇಶನ ಲಭ್ಯ !

  • ಭಿವಂಡಿಯ ಶಾಸಕ ರೈಸ್ ಶೇಖ್ ಅವರಿಂದ ಈ ಕುರಿತು ೫ ವರ್ಷಗಳ ಕಾಲ ನಿರಂತರ ಪ್ರಯತ್ನ

  • ಹಣಕಾಸು ಸಚಿವ ಅಜಿತ ಪವಾರ್ ಅವರಿಂದ ನಿಧಿ ನೀಡುವ ಭರವಸೆ

ಮುಂಬಯಿ – ಭಿವಂಡಿಯಲ್ಲಿ ಶೀಘ್ರದಲ್ಲೇ ‘ಉರ್ದು ಘರ್’ ತಲೆಯೆತ್ತಲಿದೆ. ಈ ಉದ್ದೇಶಿತ ‘ಉರ್ದು ಘರ್‌’ಗಾಗಿ ಅಗತ್ಯವಿರುವ ೨ ಸಾವಿರದ ೫೦೦ ಚದರ ಮೀಟರ್ ಭೂಮಿಯನ್ನು ಥಾಣೆ ಜಿಲ್ಲಾಧಿಕಾರಿಗಳು ಇತ್ತೀಚೆಗೆ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ ನೀಡಿದ್ದಾರೆ. ಭಿವಂಡಿ ಶಾಸಕ ರೈಸ್ ಶೇಖ್ ಅವರು ಈ ಕುರಿತು ೫ ವರ್ಷಗಳಿಂದ ನಿರಂತರ ಪ್ರಯತ್ನ ಮಾಡಿದ್ದರು. ‘ಚಾವಿಂದ್ರೆ ಗ್ರೂಪ್ ಗ್ರಾಮಪಂಚಾಯತ್’ ವ್ಯಾಪ್ತಿಯ ನಾಗಾವ್‌ನಲ್ಲಿರುವ ಭೂಮಿಯ ಮೇಲೆ ಈ ಮನೆ ನಿರ್ಮಾಣವಾಗಲಿದೆ. ಈ ಕೆಲಸವನ್ನು ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗುವುದು. ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ ಪವಾರ್ ಅವರು ದೀಪಾವಳಿ ನಂತರ ಈ ಮನೆಗೆ ಸಾಕಷ್ಟು ನಿಧಿಯನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಶೇಖ್ ಹೇಳಿದ್ದಾರೆ. ೨೦೧೧ ರ ಜನಗಣತಿಯ ಪ್ರಕಾರ ೧ ಲಕ್ಷ ೨೫ ಸಾವಿರ ಉರ್ದು ಭಾಷಿಕರ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ‘ಉರ್ದು ಘರ್’ ನಿರ್ಮಿಸುವ ಯೋಜನೆಯನ್ನು ೨೦೨೨ ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯು ರೂಪಿಸಿದೆ. ಭಿವಂಡಿಯಲ್ಲಿ ಅತಿ ಹೆಚ್ಚು ಉರ್ದು ಭಾಷಿಕರಿದ್ದಾರೆ.

ಉರ್ದು ಮನೆಯಲ್ಲಿ ಏನೆಲ್ಲಾ ಇರುತ್ತದೆ ?

ಒಂದು ದೊಡ್ಡ ಸಭಾಂಗಣ, ೨ ಸಭೆಯ ಕೊಠಡಿಗಳು, ಮಹಿಳೆಯರಿಗಾಗಿ ವಿಶ್ರಾಂತಿ ಗೃಹ, ೨ ಶೌಚಾಲಯಗಳು, ಗ್ರಂಥಾಲಯ, ವ್ಯವಸ್ಥಾಪಕ ಕೊಠಡಿ, ಸ್ಟೋರರೂಮ್, ವಾಹನ ನಿಲುಗಡೆ ಸ್ಥಳ, ಲಘು ಆಹಾರದ ಮೂಲೆಯಂತಹ ವ್ಯವಸ್ಥೆಗಳು ಇಲ್ಲಿ ಇರುತ್ತವೆ ಎಂದು ಶಾಸಕ ರೈಸ್ ಶೇಖ್ ಹೇಳಿದರು.

ಸಂಪಾದಕೀಯ ನಿಲುವು

  • ಇಲ್ಲಿ ಕೆಲವು ಸಮಯದ ನಂತರ ಯಾವುದೇ ಅಪರಾಧ ಕೃತ್ಯಗಳು ಬೆಳಕಿಗೆ ಬರಬಾರದು, ಇದೇ ನಿರೀಕ್ಷೆ!
  • ಮುಸಲ್ಮಾನರಿಗೆ ಉರ್ದು ಘರ್ ನೀಡುವುದಾದರೆ, ಈಗ ಹಿಂದೂಗಳಿಗೆ ‘ಸಂಸ್ಕೃತ ಘರ್’ ಏಕೆ ಸಿಗಬಾರದು? ಧರ್ಮದ ಆಧಾರದ ಮೇಲೆ ಇಂತಹ ಸೌಲಭ್ಯಗಳು ಹಿಂದೂಗಳಿಗೂ ಸಿಗಬೇಕು! ಎಷ್ಟು ಹಿಂದೂ ಶಾಸಕರು ಹಿಂದೂಗಳಿಗೆ ಸೌಲಭ್ಯಗಳು ಸಿಗುವುದಕ್ಕಾಗಿ ಪ್ರಯತ್ನಿಸುತ್ತಾರೆ?