ಹಿಂದೂ ಉತ್ತರಾಧಿಕಾರ ಕಾಯಿದೆ ಆದಿವಾಸಿಗಳಿಗೆ ಅನ್ವಯಿಸುವುದಿಲ್ಲ! – Supreme Court Order

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ಹಿಮಾಚಲ ಪ್ರದೇಶ ಉಚ್ಚನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ‘ಹಿಂದೂ ಉತ್ತರಾಧಿಕಾರ ಕಾಯಿದೆ 1956’ (H.S.A.) ಅನ್ನು ಪರಿಶಿಷ್ಟ ಪಂಗಡದವರಿಗೆ (ಆದಿವಾಸಿಗಳಿಗೆ) ಅನ್ವಯಿಸಲು ಸಾಧ್ಯವಿಲ್ಲ, ಎಂದು ತೀರ್ಪು ನೀಡಿದೆ. ‘ಹಿಮಾಚಲ ಪ್ರದೇಶ ಉಚ್ಚನ್ಯಾಯಾಲಯವು 2015 ರಲ್ಲಿ, ಪರಿಶಿಷ್ಟ ಪಂಗಡದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ, ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರವಲ್ಲದೆ, ಹಿಂದೂ ಉತ್ತರಾಧಿಕಾರ ಕಾಯಿದೆಯ ಅಡಿಯಲ್ಲಿ ಹೆಣ್ಣುಮಕ್ಕಳು ಪಿತೃಗಳ ಆಸ್ತಿಯ ಹಕ್ಕನ್ನು ಪಡೆಯುತ್ತಾರೆ,’ ಎಂದು ತೀರ್ಪು ನೀಡಿತ್ತು.

ಕೇಂದ್ರ ಸರಕಾರವು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಿ ನಿರ್ದೇಶನ ನೀಡುವವರೆಗೆ, ಹಿಂದೂ ಉತ್ತರಾಧಿಕಾರ ಕಾಯಿದೆಯು ಯಾವುದೇ ಪರಿಶಿಷ್ಟ ಪಂಗಡದ ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.