
ಮುಂಬಯಿ – ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಸಂಚಿನ ಆರೋಪಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಾಗಿರುವ ನಕ್ಸಲ್ ಬೆಂಬಲಿಗ ವರವರ ರಾವ್ ನ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವು ‘ವಿವೇಕ್ ವಿಚಾರ ಮಂಚ್’ ಎಂಬ ರಾಷ್ಟ್ರಪ್ರೇಮಿ ಸಂಘಟನೆಯ ಕಾರ್ಯಕರ್ತರ ವಿರೋಧದಿಂದಾಗಿ ರದ್ದುಗೊಂಡಿದೆ.
ಅಕ್ಟೋಬರ್ ೧೬ ರಂದು ‘ಸಿವಿಲೈಜೇಷನ್ ಸೆಮಿನಾರ್’ ಅಡಿಯಲ್ಲಿ ‘ಆ್ಯನ್ ಎಲೆಕ್ಟ್ರಿಕ್ ವೈರ್ ಈಸ್ ಬೆಟರ್ ದ್ಯಾನ್ ಅ ಪೊಯೆಟ್: ದಿ ಪೊಯೆಟ್ರಿ ಆಫ್ ವರವರ ರಾವ್’ ಎಂಬ ಕಾರ್ಯಕ್ರಮವನ್ನು ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವರವರ ರಾವ್ ನನ್ನು ಸನ್ಮಾನಿಸುವ ಯೋಜನೆಯಿತ್ತು. ಕೋರೆಗಾಂವ್ ಭೀಮಾ ಘಟನೆಯ ಎಲ್ಗಾರ್ ಪರಿಷತ್ತಿನಲ್ಲಿ ಪ್ರಸ್ಥಾಪಿತ ಆಡಳಿತ ವ್ಯವಸ್ಥೆಯ ವಿರುದ್ಧ ನಾಗರಿಕರನ್ನು ಪ್ರಚೋದಿಸಿದ ಆರೋಪದ ಮೇಲೆ ವರವರ ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ ತಾತ್ಕಾಲಿಕ ಜಾಮೀನು ದೊರೆತಿದೆ.
ನಕ್ಸಲಿಸಂನ ಬೆಂಬಲಿಗರಾಗಿರುವ ಮತ್ತು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ‘ವಿವೇಕ್ ವಿಚಾರ ಮಂಚ್’ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ಮಂಚ್ನಿಂದ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಯಲ್ಲಿ ಆಯೋಜಕರ ಕುರಿತು ತನಿಖೆ ನಡೆಸುವಂತೆ ಸಹ ಬೇಡಿಕೆ ಇಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಕಾರ್ಯಕ್ರಮವನ್ನು ರದ್ದುಗೊಳಿಸಿತು. ‘ವಿವೇಕ್ ವಿಚಾರ ಮಂಚ್’ ನ ರಾಜ್ಯ ಸಂಚಾಲಕ ಸಾಗರ ಶಿಂದೆ, ಮುಂಬಯಿ ಮಹಾನಗರ ಸಂಚಾಲಕ ಜಯವಂತ ತಾಂಬೆ ಮತ್ತು ನ್ಯಾಯವಾದಿ ಸಂದೀಪ ಜಾಧವ್ ಅವರು ಈ ಕಾರ್ಯಕ್ರಮವನ್ನು ರದ್ದುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ