ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದ ೬ ಕೋಟಿ ರೂಪಾಯಿ ತಲೆದಂಡವಿದ್ದ ನಕ್ಸಲ್ !

ಗಡಚಿರೋಲಿ ಜಿಲ್ಲೆ ‘ಪ್ರಥಮ ಸ್ಥಾನದ ಜಿಲ್ಲೆ’ಯಾಗುವತ್ತ ಸಾಗುತ್ತಿದೆ! – ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್

ಮುಖ್ಯಮಂತ್ರಿಗಳು ಅವರಿಗೆ ಸಂವಿಧಾನದ ಪ್ರತಿಯನ್ನು ನೀಡಿದರು.

ಗಡಚಿರೋಲಿ – ೬ ಕೋಟಿ ರೂಪಾಯಿ ತಲೆದಂಡವಿದ್ದ ನಕ್ಸಲ್ ನಾಯಕ ಸೋನು ಅಲಿಯಾಸ್ ಭೂಪತಿ ಸೇರಿದಂತೆ ೬೦ ನಕ್ಸಲರು ಶರಣಾಗಿದ್ದಾರೆ. ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿದರು.

ಈ ಸಂದರ್ಭದಲ್ಲಿ ಫಡಣವೀಸ್ ಅವರು ಮಾತನಾಡಿ, ಗಡಚಿರೋಲಿಯನ್ನು ಹಿಂದುಳಿದ ಜಿಲ್ಲೆ ಎಂದು ಗುರುತಿಸಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಈಗ ಅಧಿಕಾರಿಗಳು ಗಡಚಿರೋಲಿಯ ಸೇವಾ ಅಧಿಕಾರವನ್ನು ಕೇಳುತ್ತಾರೆ.

ಇದು ಮಹಾರಾಷ್ಟ್ರದಲ್ಲಿ ‘ಪ್ರಥಮ ಸ್ಥಾನದ ಜಿಲ್ಲೆ’ಯಾಗುವತ್ತ ಸಾಗುತ್ತಿದೆ. ಇಲ್ಲಿನ ನೀರು, ಭೂಮಿ ಮತ್ತು ಅರಣ್ಯ ನಾಶವಾಗದಂತೆ ಸರ್ಕಾರ ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ೫ ಕೋಟಿ ಗಿಡಗಳನ್ನು ನೆಡುವ ಸಂಕಲ್ಪವಿದೆ. ಅವುಗಳಲ್ಲಿ ೪೦ ಲಕ್ಷ ಗಿಡಗಳನ್ನು ಈಗಾಗಲೇ ನೆಡಲಾಗಿದೆ. ಗಡಚಿರೋಲಿ ಈಗ ‘ಸ್ಟೀಲ್ ಹಬ್’ (ಸ್ಟೀಲ್ ಹೆಚ್ಚಾಗಿ ಸಿಗುವ ಸ್ಥಳ) ಆಗಿದೆ. ಇದರಲ್ಲಿ ಇಲ್ಲಿನ ಶೇಕಡಾ ೯೫% ರಷ್ಟು ಸ್ಥಳೀಯ ಜನರಿಗೆ ಪ್ರಾಶಸ್ತ್ಯ ನೀಡಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು (ಸಿಎಪಿಎಫ್) ಅಭಿನಂದಿಸಿದರು. ಈ ವೇಳೆ ಫಡಣವೀಸ್ ಅವರು ಎಚ್ಚರಿಕೆ ನೀಡುತ್ತಾ, ನಕ್ಸಲ್ ಚಳುವಳಿಯ ಜನರು ಮುಂದಿನ ೨ ವರ್ಷಗಳಲ್ಲಿಯೂ ಕೂಡ ದಾಳಿ ಮುಂದುವರೆಸಬಹುದು. ಇದಕ್ಕಾಗಿ ಪೂರ್ಣ ಸಾಮರ್ಥ್ಯದಿಂದ ಕೆಲಸ ಮಾಡುತ್ತಿರಬೇಕು ಎಂದು ಕರೆ ನೀಡಿದರು.