ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ, ಇದು ದೇವರ ಕೃಪೆ ! – ಕೇಂದ್ರ ಸಚಿವ ನಿತಿನ್ ಗಡ್ಕರಿ

ಜಾತಿಯಿಂದಲ್ಲ, ಕರ್ತೃತ್ವ ಮನುಷ್ಯನನ್ನು ದೊಡ್ಡವನಾಗಿ ಮಾಡುತ್ತದೆ ಎಂದು ಪ್ರತಿಪಾದನೆ!

ನಾಗ್ಪುರ – ಬ್ರಾಹ್ಮಣ ಸಮುದಾಯಕ್ಕೆ ಮೀಸಲಾತಿ ನೀಡಿಲ್ಲ, ಇದನ್ನು ನಾನು ದೇವರ ಅತಿದೊಡ್ಡ ಉಪಕಾರವೆಂದು ಭಾವಿಸುತ್ತೇನೆ, ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಮನುಷ್ಯನು ತನ್ನ ಜಾತಿಯಿಂದಲ್ಲ, ಬದಲಿಗೆ ಅವನ ಕರ್ತೃತ್ವದಿಂದ ದೊಡ್ಡವನಾಗುತ್ತಾನೆ’ ಹೀಗೆಂದು ಅವರು ದೃಢವಾಗಿ ಹೇಳಿದರು. ಸೆಪ್ಟೆಂಬರ್ 21ರಂದು ನಾಗ್ಪುರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, ‘ನಾನು ಬ್ರಾಹ್ಮಣನಾದರೂ, ನನಗೆ ಜಾತಿ-ಭೇದಗಳಲ್ಲಿ ನಂಬಿಕೆಯಿಲ್ಲ. ಮನುಷ್ಯನು ಜಾತಿ, ಧರ್ಮ ಅಥವಾ ಲಿಂಗದಿಂದ ದೊಡ್ಡವನಾಗುವುದಿಲ್ಲ, ಬದಲಿಗೆ ಅವನ ಗುಣಗಳು ಮತ್ತು ಕರ್ತೃತ್ವದಿಂದ ದೊಡ್ಡವನಾಗುತ್ತಾನೆ’. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿರುವ ಬ್ರಾಹ್ಮಣ ಸಮುದಾಯವನ್ನು ಉಲ್ಲೇಖಿಸಿ, ಅಲ್ಲಿನ ದುಬೆ, ತ್ರಿಪಾಠಿ, ಮಿಶ್ರ ಮುಂತಾದ ಬ್ರಾಹ್ಮಣ ಸಮುದಾಯದವರು ಪ್ರಭಾವಶಾಲಿಯಾಗಿದ್ದಾರೆ, ಆದರೆ ಮಹಾರಾಷ್ಟ್ರದಲ್ಲಿ ಅವರಿಗೆ ಅಂತಹ ವಿಶೇಷ ಪ್ರಾಮುಖ್ಯತೆ ದೊರೆತಿಲ್ಲ ಎಂದು ಹೇಳಿದರು.