ಕೇರಳದಲ್ಲಿನ ಒಂದು ಮಹಾವಿದ್ಯಾಲಯದಲ್ಲಿನ ಚರ್ಚಾ ಕೂಟದಲ್ಲಿ ವಿದ್ಯಾರ್ಥಿ ಮತ್ತು ಮುಸಲ್ಮಾನ ವಿದ್ಯಾರ್ಥಿನಿಯರ ನಡುವೆ ಪರದೆ !- Kerala Cochin University

ಕಾಸರಗೋಡು (ಕೇರಳ) – ಇಲ್ಲಿಯ ಕಾಲೇಜಿನಲ್ಲಿ ನಡೆದ ಗಾಜಾ ಕುರಿತಾದ ಚರ್ಚಾ ಕೂಟದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ನಡುವೆ ಪರದೆ ಹಾಕಲಾಗಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹಿಜಾಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪರದೆಯ ಹಿಂದೆ ಕೂರಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಡುವೆ ಪರದೆಯನ್ನು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ವೇದಿಕೆಯ ಮೇಲೆ ಇಸ್ಲಾಮಿಕ್ ಕಟ್ಟರವಾದಿ ವಿಚಾರವಂತ ಡಾ. ಅಬ್ದುಲ್ಲಾ ಬೆಸಿಲ್ ಸಿ.ಪಿ. ವೇದಕೆಯಿಂದ ಮಾತನಾಡುತ್ತಿದ್ದರು.

‘ಗಾಜಾದಿಂದ ವಿಜ್ಞಾನ ಮತ್ತು ವಿಜ್ಞಾನದಿಂದ ಧರ್ಮದವರೆಗೆ’ ಎಂಬುದು ಈ ಚರ್ಚಾ ಕೂಟದ ವಿಷಯವಾಗಿತ್ತು. ಡಾ. ಅಬ್ದುಲ್ಲಾ ಬೆಸಿಲ್ ಹಿಜಾಬ್ ಅನ್ನು ಬೆಂಬಲಿಸುತ್ತಾ ಅದರ ಪ್ರಚಾರ ಮಾಡುತ್ತಿದ್ದರು. ಇದಕ್ಕೂ ಮೊದಲು, ಒಂದು ವಿಡಿಯೋದಲ್ಲಿ, ಹಿಜಾಬ್ ವಿರೋಧಿಸಿ ಮಾತನಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಬೆಸಿಲ್ ವಿಚಿತ್ರ ವಾದಗಳನ್ನು ಮಂಡಿಸಿ ಮೌನಗೊಳಿಸಿದ್ದರು.

ಸಂಪಾದಕೀಯ ನಿಲುವು

ಕೇರಳದಲ್ಲಿ ಶರಿಯಾ ಕಾನೂನು ಜಾರಿಯಲ್ಲಿ ಇರುವ ಹಾಗೆ ಸ್ಥಿತಿ ಇದೆ. ಪ್ರಸ್ತುತ ಇಂತಹ ಸ್ಥಿತಿ ತಾಲಿಬಾನದ ವಶದಲ್ಲಿರುವ ಅಪಘಾನಿಸ್ತಾನದಲ್ಲಿ ಕಂಡು ಬರುತ್ತದೆ. ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ಆಡಳಿತವೂ ಇದೇ ರೀತಿ ನಡೆಯುತ್ತಿದೆ ಎಂದು ಯಾರಾದರೂ ಹೇಳಿದರೆ, ಅದು ತಪ್ಪಾಗಲಾರದು!