ರಾಜ್ಯದಲ್ಲಿ ಸರಕಾರೀಕರಣಗೊಂಡಿರುವ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಹೆಚ್ಚಳ ! : ಭಕ್ತರಲ್ಲಿ ಆಕ್ರೋಶದ ಅಲೆ

ಬೆಂಗಳೂರು – ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ದೇವಸ್ಥಾನಗಳಲ್ಲಿ ಇನ್ನು ಮುಂದೆ ಪೂಜಾ ವಿಧಿಗಳು, ಅಭಿಷೇಕ ಮುಂತಾದ ಪ್ರಮುಖ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಸರಕಾರ ಕೈಗೊಂಡಿರುವ ಈ ನಿರ್ಧಾರದಿಂದ ಭಕ್ತರಲ್ಲಿ ಆಕ್ರೋಶದ ಅಲೆ ಹಬ್ಬಿದೆ. ರಾಜ್ಯದ ‘ಎ’ ಶ್ರೇಣಿಯ ದೇವಸ್ಥಾನಗಳಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ, ಮಲೈ ಮಹಾದೇಶ್ವರ ಮುಂತಾದ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿವಿಧ ಪೂಜೆಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ದೇವಸ್ಥಾನದಲ್ಲಿ ನಾಗಪ್ರತಿಷ್ಠಾ ವಿಧಿಯ ಶುಲ್ಕವನ್ನು 400 ರೂಪಾಯಿಗಳಿಂದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಆಶ್ಲೇಷ ಬಲಿ ಪೂಜೆ (ಸರ್ಪದೋಷ ನಿವಾರಣೆಯ ಒಂದು ವಿಧಿ) ಸೇವೆಗಳಲ್ಲಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಪುಷ್ಪಾಂಜಲಿ (ಮಂತ್ರ ಸಹಿತ ಹೂಗಳನ್ನು ಅರ್ಪಿಸುವ) ಸೇವೆಯ ಶುಲ್ಕವನ್ನು 120 ರೂಪಾಯಿಗಳಿಂದ 200 ರೂಪಾಯಿಗಳಿಗೆ ಏರಿಸಲಾಗಿದೆ. ಈ ಪರಿಷ್ಕೃತ ಪೂಜಾ ಶುಲ್ಕಗಳು ಮುಂದಿನ ತಿಂಗಳಿನಿಂದ, ಅಂದರೆ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ ಎಂದು ವರದಿಯಾಗಿದೆ.

ಸಂಪಾದಕೀಯ ನಿಲುವು

ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ!