‘ಉತ್ತರ ಭಾರತದ ನಾಯಕರು, ಚಂದ್ರನ ಮೇಲೆ ಮೊದಲು ಹೋದವರು ಹನುಮಂತ ಎಂದು ಹೇಳುತ್ತಾರೆ!’

ಡಿಎಂಕೆ ಸಂಸದೆ ಕನಿಮೋಳಿ ಅವರ ಹಿಂದೂದ್ವೇಷಿ ಹೇಳಿಕೆ

ಮಧುರೈ (ತಮಿಳುನಾಡು) – ನೀವು ಚಿಕ್ಕ ಮಕ್ಕಳನ್ನು ‘ಮೊದಲು ಚಂದ್ರನ ಮೇಲೆ ಹೋದವರು ಯಾರು?’ ಎಂದು ಕೇಳಿದರೆ, ಅವರು ‘ನೀಲ್ ಆರ್ಮ್‌ಸ್ಟ್ರಾಂಗ್’ ಎಂದು ಹೇಳುತ್ತಾರೆ; ಆದರೆ, ಉತ್ತರ ಭಾರತದ ಕೆಲವು ನಾಯಕರು ತಮ್ಮ ಜನಪದ ಕಥೆಗಳ ಪ್ರಕಾರ ‘ಅಜ್ಜಿ ಅಥವಾ ಹನುಮಂತ ಮೊದಲು ಚಂದ್ರನ ಮೇಲೆ ಕಾಲಿಟ್ಟರು’ ಎಂದು ಹೇಳಬಹುದು. ಅದೃಷ್ಟವಶಾತ್, ತಮಿಳುನಾಡಿನಲ್ಲಿ ಇಂತಹ ನಾಯಕರಿಲ್ಲ ಎಂದು ಡಿಎಂಕೆ ಸಂಸದೆ ಕನಿಮೋಳಿ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದ್ವೇಷಿ ಹೇಳಿಕೆ ನೀಡಿದ್ದಾರೆ.

ಕಳೆದ ತಿಂಗಳು ರಾಷ್ಟ್ರೀಯ ಬಾಹ್ಯಾಕಾಶ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದಾಗ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ‘ಹನುಮಂತ ಮೊದಲ ಗಗನಯಾತ್ರಿಯಾಗಿದ್ದನು’ ಎಂದು ಹೇಳಿದ್ದರು. ಸಚಿವ ಅನುರಾಗ್ ಅವರ ಆ ಹೇಳಿಕೆ ಬಳಿಕ ಕನಿಮೋಳಿ ಹೀಗೆ ವ್ಯಂಗ್ಯವಾಡಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಭಾರತದ ನಾಯಕರು ಹೀಗೆ ಹೇಳುತ್ತಾರೋ ಇಲ್ಲವೋ ಎಂಬುದು ಬೇರೆ ವಿಷಯ, ಆದರೆ ಡಿಎಂಕೆ ನಾಯಕರು ‘ರಾವಣ ಪೂಜನೀಯ’ ಎಂದು ಖಂಡಿತವಾಗಿಯೂ ಹೇಳುತ್ತಾರೆ!