ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು!

  • ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಘೋಷಣೆ

  • ಶೀಘ್ರದಲ್ಲೇ ಬಿಹಾರದಲ್ಲಿ ಗೋರಕ್ಷಾ ಸಂಕಲ್ಪ ಯಾತ್ರೆ ಪ್ರಾರಂಭ

  • ಗೋಹತ್ಯೆ ವಿರುದ್ಧ ಕೆಲಸ ಮಾಡಲು ಬದ್ಧರಾಗಿರುವ ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ

ಪಾಟಲಿಪುತ್ರ (ಬಿಹಾರ) – ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ, ಅವರು ಶೀಘ್ರದಲ್ಲೇ ಬಿಹಾರದಲ್ಲಿ ‘ಗೋರಕ್ಷಾ ಸಂಕಲ್ಪ ಯಾತ್ರೆ’ ಪ್ರಾರಂಭಿಸಲಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೋಹತ್ಯೆ ವಿರುದ್ಧ ಕೆಲಸ ಮಾಡಲು ಬದ್ಧರಾಗಿರುವ ಸ್ವತಂತ್ರ ಅಭ್ಯರ್ಥಿಗಳಿಗೂ ಬೆಂಬಲ ನೀಡುವುದಾಗಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಾತು ಮುಂದುವರೆಸಿ,
1. ಕಳೆದ 7 ದಶಕಗಳು ಮತ್ತು ಅನೇಕ ಭರವಸೆಗಳ ನಂತರವೂ ಯಾವುದೇ ಪಕ್ಷವು ಗೋಹತ್ಯೆ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿಲ್ಲ. ಬಿಹಾರ ಚುನಾವಣೆಯಲ್ಲಿ ನಾವು ಗೋರಕ್ಷಣೆ ಮತ್ತು ಸನಾತನ ಧರ್ಮಕ್ಕಾಗಿ ಮತ ಚಲಾಯಿಸುತ್ತೇವೆ.

2. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಾವು ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಲ್ಲದೆ, 243 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ; ಆದರೆ ನಾವು ಅವರ ಹೆಸರುಗಳನ್ನು ಈಗಲೇ ಬಹಿರಂಗಪಡಿಸುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ, ಗೋರಕ್ಷಣೆಗೆ ಸಮರ್ಪಿತರಾದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ನಾವು ನಿಲ್ಲಿಸುತ್ತೇವೆ.

3. ಗೋಹತ್ಯೆ ಪಾಪ ಎಂದು ಪರಿಗಣಿಸುವ ಮತ್ತು ಈ ದೇಶದ ಹಿಂದೂಗಳ ವ್ಯಾಪಕ ಭಾವನೆಗಳಿಗೆ ಅನುಗುಣವಾಗಿ ಅವರ ರಕ್ಷಣೆಗಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ನಾವು ಈಗ ಮತದಾರರಿಗೆ ಕರೆ ನೀಡುತ್ತೇವೆ.

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷ ಗೋರಕ್ಷಣೆಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರೆ, ಇನ್ನೊಂದೆಡೆ ದೇಶದಲ್ಲಿ ಗೋಮಾಂಸ ರಫ್ತು ಹೆಚ್ಚುತ್ತಿದೆ. ಇದು ಅತ್ಯಂತ ಆಘಾತಕಾರಿ ಮತ್ತು ಅಹಿತಕರ ಸಂಗತಿ ಆಗಿದೆ. – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ