
ಧಾರಾಶಿವ್, ಸೆಪ್ಟೆಂಬರ್ 10 (ವಾರ್ತೆ) – ಮರಾಠಾ ಮೀಸಲಾತಿಗಾಗಿ ಮನೋಜ್ ಜಾರಂಗೆ-ಪಾಟೀಲ್ ಅವರ ನಾಯಕತ್ವದಲ್ಲಿ ಮುಂಬಯಿನ ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯ ನಂತರ, ಮಹಾರಾಷ್ಟ್ರ ಸರಕಾರವು ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳಲ್ಲಿ ‘ಕುಣಬಿ’ ಎಂದು ಜಾತಿ ಉಲ್ಲೇಖ ಇರುವ ಮರಾಠಾ ಸಮುದಾಯದ ಜನರಿಗೆ ಮೀಸಲಾತಿಯ ಲಾಭ ನೀಡುವುದಾಗಿ ಘೋಷಿಸಿದೆ.

ಇದರ ಪರಿಣಾಮವಾಗಿ, ಮರಾಠವಾಡದ ಛತ್ರಪತಿ ಸಂಭಾಜಿನಗರ, ಧಾರಾಶಿವ್, ಹಿಂಗೋಲಿ, ಜಾಲ್ನಾ, ಲಾತೂರ್, ನಾಂದೇಡ್, ಪರ್ಭಾನಿ ಮತ್ತು ಬೀಡ್ ಜಿಲ್ಲೆಗಳಲ್ಲಿನ ಮರಾಠಾ ಸಮುದಾಯದ ಜನರು, ತಮ್ಮ ಹಳೆಯ ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳನ್ನು ಮೋಡಿ ಲಿಪಿ ಬಲ್ಲವರಿಂದ ಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಹಳೆಯ ದಾಖಲೆಗಳು ಮೋಡಿ ಲಿಪಿಯಲ್ಲಿರುವುದರಿಂದ, ಮರಾಠವಾಡದಲ್ಲಿ ಮೋಡಿ ಲಿಪಿ ಬಲ್ಲವರ ಮನೆಗಳ ಮುಂದೆ ಈ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಜನಸಮೂಹ ಹೆಚ್ಚಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ