ಕುಣಬಿ-ಮರಾಠಾ ಪ್ರಮಾಣಪತ್ರಗಳ ಖಚಿತತೆಗಾಗಿ ಮರಾಠವಾಡದಲ್ಲಿ ಮೋಡಿ ಲಿಪಿ ಬಲ್ಲವರ ಕಡೆಗೆ ಜನಸಂದಣಿ!

ಧಾರಾಶಿವ್, ಸೆಪ್ಟೆಂಬರ್ 10 (ವಾರ್ತೆ) – ಮರಾಠಾ ಮೀಸಲಾತಿಗಾಗಿ ಮನೋಜ್ ಜಾರಂಗೆ-ಪಾಟೀಲ್ ಅವರ ನಾಯಕತ್ವದಲ್ಲಿ ಮುಂಬಯಿನ ಆಜಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯ ನಂತರ, ಮಹಾರಾಷ್ಟ್ರ ಸರಕಾರವು ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳಲ್ಲಿ ‘ಕುಣಬಿ’ ಎಂದು ಜಾತಿ ಉಲ್ಲೇಖ ಇರುವ ಮರಾಠಾ ಸಮುದಾಯದ ಜನರಿಗೆ ಮೀಸಲಾತಿಯ ಲಾಭ ನೀಡುವುದಾಗಿ ಘೋಷಿಸಿದೆ.

ಮೋಡಿ ಲಿಪಿ

ಇದರ ಪರಿಣಾಮವಾಗಿ, ಮರಾಠವಾಡದ ಛತ್ರಪತಿ ಸಂಭಾಜಿನಗರ, ಧಾರಾಶಿವ್, ಹಿಂಗೋಲಿ, ಜಾಲ್ನಾ, ಲಾತೂರ್, ನಾಂದೇಡ್, ಪರ್ಭಾನಿ ಮತ್ತು ಬೀಡ್ ಜಿಲ್ಲೆಗಳಲ್ಲಿನ ಮರಾಠಾ ಸಮುದಾಯದ ಜನರು, ತಮ್ಮ ಹಳೆಯ ‘ಹೈದರಾಬಾದ್ ಗೆಜೆಟಿಯರ್’ ದಾಖಲೆಗಳನ್ನು ಮೋಡಿ ಲಿಪಿ ಬಲ್ಲವರಿಂದ ಪರಿಶೀಲನೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಹಳೆಯ ದಾಖಲೆಗಳು ಮೋಡಿ ಲಿಪಿಯಲ್ಲಿರುವುದರಿಂದ, ಮರಾಠವಾಡದಲ್ಲಿ ಮೋಡಿ ಲಿಪಿ ಬಲ್ಲವರ ಮನೆಗಳ ಮುಂದೆ ಈ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಜನಸಮೂಹ ಹೆಚ್ಚಿದೆ.