ಅಮರಾವತಿಯಲ್ಲಿ ಭೂಕಂಪ; ಜೀವಹಾನಿ ಇಲ್ಲ!

ಅಮರಾವತಿ – ಸೆಪ್ಟೆಂಬರ್ 7ರ ಬೆಳಿಗ್ಗೆ ಭೂಕಂಪದ ಸೌಮ್ಯ ಅನುಭವವಾಗಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಭೂಕಂಪದಿಂದಾಗಿ ಗ್ರಾಮದ ಅನೇಕ ಕಡೆಗಳಲ್ಲಿ ಅಡಿಗೆಮನೆಯ ಪಾತ್ರೆಗಳು ಕೆಳಗೆ ಬಿದ್ದವು ಮತ್ತು ಒಂದು ಕಡೆ ಚರಂಡಿಗೆ ಬಿರುಕುಗಳು ಮೂಡಿದವು. ಈ ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ಸ್ಥಳೀಯ ಸರ್ಕಾರವು ಈ ಹಾನಿಯ ಪರಿಶೀಲನೆ ನಡೆಸಿದೆ.