ಬಾನು ಮುಸ್ತಾಕ್ ಇಸ್ಲಾಮ್‌ ಬಗ್ಗೆ ಟೀಕೆ ಮಾಡುತ್ತಿದ್ದರೆ, ಅವರನ್ನು ಕಲ್ಲಿನಿಂದ ಹೊಡೆದು ಸಾಯಿಸುತ್ತಿದ್ದರು! : BJP MLC C.T. Ravi

ಭಾಜಪ ಶಾಸಕ ಸಿ.ಟಿ. ರವಿ ಅವರ ಹೇಳಿಕೆ

ಬಿಜೆಪಿ ಶಾಸಕ ಸಿ.ಟಿ. ರವಿ ಮತ್ತು ಬರಹಗಾರ್ತಿ ಬಾನು ಮುಷ್ತಾಕ್

ರಾಯಚೂರು – ಲೇಖಕಿ ಬಾನು ಮುಸ್ತಾಕ್ ಅವರು ತಾಯಿ ಭುವನೇಶ್ವರಿ ಮತ್ತು ಕನ್ನಡ ಸಂಸ್ಕೃತಿಯ ಸಂಕೇತಗಳ ವಿರುದ್ಧ ಹೇಳಿಕೆ ನೀಡಿದ ರೀತಿಯಲ್ಲಿ ಇಸ್ಲಾಮ್‌ ವಿರುದ್ಧ ಹೇಳಿದ್ದರೆ, ಅವರನ್ನು ಕಲ್ಲಿನಿಂದ ಹೊಡೆದು ಸಾಯಿಸುತ್ತಿದ್ದರು ಎಂದು ಭಾಜಪ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಸ್ತಾಕ್ ಅವರ ವಿಚಾರಗಳು ಈ ಭೂಮಿಯ ಸಂಸ್ಕೃತಿಯ ವಿರುದ್ಧವಾಗಿವೆ. ಮೈಸೂರು ದಸರಾ ಬಾನು ಮುಸ್ತಾಕ್ ಅವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

ಅವರು ಮಾತು ಮುಂದುವರೆಸಿ, “ನಾವು ಇಸ್ಲಾಮ್, ಕುರಾನ್ ಅಥವಾ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಇದೇ ರೀತಿ ಏನಾದರೂ ಮಾತನಾಡಿದರೆ, ಅವರು ಸಹಿಸಿಕೊಳ್ಳುತ್ತಾರೆಯೇ? ನಾವು ಬಾನು ಮುಶ್ತಾಕ್ ಅವರಿಗೆ ಅವರು ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕೇವಲ ಬೇಡಿಕೆ ಇಡುತ್ತಿದ್ದೇವೆ” ಎಂದರು.

ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ, “ಅವರು ವೋಟ್‌ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ” ಎಂದು ಹೇಳಿದರು.

ತಾಯಿ ಚಾಮುಂಡಿಯ ಶಾಪದಿಂದ ತಪ್ಪಿಸಿಕೊಳ್ಳಬೇಕಾದರೆ, ಬಾನು ಮುಶ್ತಾಕ್ ಬರಬಾರದು! – ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಶಾಸಕ ಬಸನಗೌಡ ಪಾಟೀಲ

ಬೆಂಗಳೂರು – ಈ ವರ್ಷದ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಶ್ತಾಕ್ ಅವರನ್ನು ಆಹ್ವಾನಿಸುವ ಸರಕಾರದ ನಿರ್ಧಾರವನ್ನು ಅಮಾನತುಗೊಂಡ ಭಾಜಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಖಂಡಿಸಿದರು. ಅವರು ಮಾತನಾಡಿ “ದಸರಾ ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಅದು ಸನಾತನ ಹಿಂದೂ ಧಾರ್ಮಿಕ ಸಂಪ್ರದಾಯವನ್ನು ಆಧರಿಸಿದ ಒಂದು ಹಬ್ಬವಾಗಿದೆ” ಎಂದು ಹೇಳಿದರು. ಚಾಮುಂಡಿ ದೇವಿಯ ಮೆರವಣಿಗೆಯನ್ನು ಹೂವಿನ ಪೂಜೆಯೊಂದಿಗೆ ಉದ್ಘಾಟಿಸಲಾಗುತ್ತದೆ. ಕನ್ನಡ ಧ್ವಜ ಮತ್ತು ಹಳದಿ-ಕುಂಕುಮದ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯನ್ನು ದಸರಾ ಉದ್ಘಾಟನೆಗಾಗಿ ಆಯ್ಕೆ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ತಪ್ಪು. ಬಾನು ಮುಶ್ತಾಕ್ ಅವರಿಗೆ ಚಾಮುಂಡಿ ತಾಯಿಯ ಶಾಪದಿಂದ ತಪ್ಪಿಸಿಕೊಳ್ಳಬೇಕಿದ್ದರೆ, ಅವರು ದಸರಾ ಉದ್ಘಾಟನಾ ಕಾರ್ಯಕ್ರಮದಿಂದ ದೂರವಿರುವುದು ಅವರಿಗೆ ಹಿತಕರವಾಗಿದೆ ಎಂದು ಹೇಳಿದರು.