ಮಹಿಳಾ ಪತ್ರಕರ್ತೆಯು ‘ಗರ್ಭಿಣಿಯರಿಗಾಗಿ ಆಸ್ಪತ್ರೆಗಳನ್ನು ಯಾವಾಗ ನಿರ್ಮಿಸುತ್ತೀರಿ?’, ಎಂದು ಪ್ರಶ್ನಿಸಿದಾಗ ಕಾಂಗ್ರೆಸ್ ಶಾಸಕರಿಂದ ಆಕ್ಷೇಪಾರ್ಹ ಉತ್ತರ!

ಬೆಂಗಳೂರು – ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ಮಹಿಳಾ ಪತ್ರಕರ್ತೆಯೊಬ್ಬರು ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು, ‘ಈ ಭಾಗದಲ್ಲಿ ನಡೆಯುವ ಅಪಘಾತಗಳು ಮತ್ತು ವಿಶೇಷವಾಗಿ ಗರ್ಭಿಣಿಯರಿಗೆ ಆಗುತ್ತಿರುವ ಅನಾನುಕೂಲತೆಗಳಿಂದಾಗಿ, ಈ ಪ್ರದೇಶದಲ್ಲಿ ಆಸ್ಪತ್ರೆ ಸೌಲಭ್ಯ ಯಾವಾಗ ಲಭ್ಯವಾಗಲಿದೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಶಾಸಕ ದೇಶಪಾಂಡೆ ನಗುತ್ತಾ ಮತ್ತು ಕಣ್ಣು ಮಿಟುಕಿಸುತ್ತಾ, “ಚಿಂತಿಸಬೇಡಿ, ನಿಮ್ಮ ಹೆರಿಗೆಯನ್ನು ನಾವು ಬೇರೆ ಎಲ್ಲಾದರೂ ಮಾಡಿಸುತ್ತೇವೆ” ಎಂದು ಹೇಳಿದರು. ಮಹಿಳಾ ಪತ್ರಕರ್ತೆ ‘ಏನು ಸರ್?’ ಎಂದು ಕೇಳಿದಾಗ, ಶಾಸಕರು ತಮ್ಮ ಉತ್ತರವನ್ನು ಪುನರಾವರ್ತಿಸಿ, “ನಿಮ್ಮ ಹೆರಿಗೆಯ ಸಮಯ ಬಂದಾಗ ನಾವು ಅದನ್ನು ಪೂರ್ಣಗೊಳಿಸುತ್ತೇವೆ” ಎಂದು ಆಕ್ಷೇಪಾರ್ಹ ಉತ್ತರ ನೀಡಿದರು.
🚨 Shocking!
Karnataka Congress MLA & ex-Minister RV Deshpande, when asked by a woman journalist about a hospital for pregnant women, arrogantly said: “We’ll get your delivery done elsewhere!”
If this is how he insults a journalist, how would he treat ordinary women? Such MLAs… pic.twitter.com/S59mFrhKB2
— Sanatan Prabhat (@SanatanPrabhat) September 3, 2025
ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು ಮತ್ತು ಇತರ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಪತ್ರಕರ್ತೆ ಶಾಸಕರನ್ನು ಪರಿಹಾರದ ಬಗ್ಗೆ ಕೇಳಿದಾಗ ಅವರು ಮೇಲೆ ತಿಳಿಸಿದ ಉತ್ತರ ನೀಡಿದರು. ಶಾಸಕ ದೇಶಪಾಂಡೆ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಜನರು ಅವರ ಹೇಳಿಕೆಯನ್ನು ಅತ್ಯಂತ ಸಂವೇದನಾಹೀನ ಮತ್ತು ಅವಮಾನಕರ ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ಇದು ಮಹಿಳೆಯರಿಗೆ ಮಾಡಿದ ಅವಮಾನ ಮತ್ತು ಕಾಂಗ್ರೆಸ್ನ ಕೆಳಮಟ್ಟದ ಮನಸ್ಥಿತಿಯ ಉದಾಹರಣೆ ಎಂದು ಟೀಕಿಸಿವೆ.
ಶಾಸಕ ದೇಶಪಾಂಡೆ ಅವರು ರಾಜ್ಯ ಸರಕಾರದಲ್ಲಿ ಕಂದಾಯ, ಕೈಗಾರಿಕೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಪ್ರಸ್ತುತ ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!