ಮನೋಜ್ ಜಾರಂಗೆ ಅವರು ೫ ದಿನಗಳ ನಂತರ ಉಪವಾಸವನ್ನು ನಿಲ್ಲಿಸಿದರು!

ಮುಂಬಯಿ – ಮರಾಠಾ ಮೀಸಲಾತಿಗೆ ಸಂಬಂಧಿಸಿದ ಸರಕಾರದ ಸುಗ್ರೀವಾಜ್ಞೆಯನ್ನು ಸ್ವೀಕರಿಸಿದ ನಂತರ ಜಾರಂಗೆ ಪಾಟೀಲ್ ಅವರು ಉಪವಾಸವನ್ನು ನಿಲ್ಲಿಸಿದರು. ‘ಮೀಸಲಾತಿಯ ಹೋರಾಟವನ್ನು ಗೆದ್ದಿದ್ದೇವೆ’ ಎಂದು ಅವರು ಈ ಸಮಯದಲ್ಲಿ ಹೇಳಿದರು. ಅವರು ಎಲ್ಲಾ ಆಂದೋಲನಕಾರರಿಗೆ ಆಂದೋಲನವನ್ನು ನಿಲ್ಲಿಸಿ ಹಳ್ಳಿಗೆ ಹೋಗುವಂತೆ ಸೂಚನೆ ನೀಡಿದರು.

ಅಧ್ಯಯನಕಾರರು ಸುಗ್ರೀವಾಜ್ಞೆಯಲ್ಲಿ ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದಾರೆ. ಅವುಗಳನ್ನು ಮೀಸಲಾತಿ ಉಪಸಮಿತಿಯು ಸ್ವೀಕರಿಸಿದೆ. ನಂತರ ಉಪಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಜಾರಂಗೆ ಪಾಟೀಲ್ ಅವರಿಗೆ ಉಪವಾಸವನ್ನು ನಿಲ್ಲಿಸುವಂತೆ ವಿನಂತಿಸಿದರು. ಇದಾದ ನಂತರ ಜಾರಂಗೆ ಪಾಟೀಲ್ ಅವರು ಉಪವಾಸವನ್ನು ನಿಲ್ಲಿಸಿದರು.