‘ನಿತೇಶ್ ರಾಣೆ ಅವರು ಇಡೀ ದಿನ ‘ವರಾಹ ಅವತಾರ’ ಧರಿಸಿ ‘ವರಾಹ ಜಯಂತಿ’ ಆಚರಿಸಬೇಕಂತೆ’

ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ ಅವರ ಹಿಂದೂ ದ್ವೇಷಿ ಹೇಳಿಕೆ

ಮುಂಬಯಿ – ನಿತೇಶ ರಾಣೆ ಅವರು ತಮ್ಮ ಪೂರ್ವಜರನ್ನು ಮರೆತಿಲ್ಲ ಎಂಬುದು ಒಳ್ಳೆಯ ವಿಷಯ. ಅದಕ್ಕಾಗಿಯೇ ಅವರು ಈ ಎಲ್ಲ ಹಬ್ಬಗಳನ್ನು ಆಚರಿಸಲು ಬಯಸುತ್ತಾರೆ. ಇದು ತುಂಬಾ ಒಳ್ಳೆಯ ವಿಷಯ. ಇದರ ನಿಮಿತ್ತ ನಿತೇಶ್ ರಾಣೆ ಮತ್ತು ಅವರ ಬೆಂಬಲಿಗರು ಈ ದಿನವನ್ನು ಆಚರಿಸುವಾಗ ಇಡೀ ದಿನ ‘ವರಾಹ ಅವತಾರ’ದಲ್ಲಿರಬೇಕು. ಈ ಅವತಾರದಲ್ಲಿ ಅವರು ಈ ಜಯಂತಿಯನ್ನು ಆಚರಿಸಬೇಕು. ಆಗ ಮಾತ್ರ ನಿಜವಾದ ವರಾಹ ಜಯಂತಿ ಆಚರಿಸಲು ಸಾಧ್ಯ ಎಂಬ ಅವಮಾನಕರ ರೀತಿಯಲ್ಲಿ ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ವರಾಹ ಜಯಂತಿ ಆಚರಿಸುವಂತೆ ಮಾಡಿದ ಕರೆಯನ್ನು ಟೀಕಿಸಿದರು. ಆಗಸ್ಟ್ 25 ರಂದು ವರಾಹ ಜಯಂತಿಯಿದೆ.

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಅವರ ಹಿಂದೂ ದ್ವೇಷಿ ಹೇಳಿಕೆ!

‘ವರಾಹವನ್ನು ಹಿಡಿದು ತನ್ನ ಮನೆಗೆ ತಂದು ಪೂಜಿಸಬೇಕಂತೆ’

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಕೂಡ ನಿತೇಶ್ ರಾಣೆ ಅವರನ್ನು ಟೀಕಿಸಿ, ವರಾಹ ಜಯಂತಿ ಆಚರಿಸಬೇಕಿದ್ದರೆ, ನಿತೇಶ್ ರಾಣೆ ಮೊದಲು ತಮ್ಮ ಮನೆಯಿಂದಲೇ ಅದನ್ನು ಪ್ರಾರಂಭಿಸಬೇಕು. ಅವರು ಕೆಲವು ವರಾಹಗಳನ್ನು ಹಿಡಿದು ತಂದು ಅವುಗಳನ್ನು ಪೂಜಿಸಬೇಕು. ವರಾಹ ಪೂಜೆ ಎಂದರೆ ವರಾಹದ ಚಿತ್ರವನ್ನು ಪೂಜಿಸುವುದಲ್ಲ, ಆದರೆ ಅವರು ನಿಜವಾದ ವರಾಹವನ್ನು ಹಿಡಿದು ತಂದು ತಮ್ಮ ಮನೆಯಲ್ಲಿಯೇ ಪೂಜಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂಗಳಿಗೆ ಪೂಜನೀಯ ಆಗಿರುವ ಭಗವಾನ್ ವಿಷ್ಣುವಿನ ಅವತಾರವನ್ನು ಈ ರೀತಿ ಅವಮಾನಿಸುವ ಧೈರ್ಯವಿದೆ; ಏಕೆಂದರೆ ಹಿಂದೂಗಳು ಸಹಿಷ್ಣುಗಳು. ಇತರ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಈ ಹೊತ್ತಿಗೆ ‘ಸರ್ ತನ್ ಸೆ ಜುದಾ’ (ಶಿಕ್ಷೆ) ಫತ್ವಾ ಹೊರಡುತ್ತಿತ್ತು; ಆದರೆ ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರು ಕಾನೂನುಬದ್ಧ ಮಾರ್ಗದಲ್ಲಿ ಪ್ರತಿಭಟಿಸುತ್ತಾರೆ.
  • ಸುಷ್ಮಾ ಅಂಧಾರೆ ಅವರ ಇತಿಹಾಸ ನೋಡಿದರೆ, ಅವರು ಹಿಂದೂ ಧರ್ಮವನ್ನು ಮಾತ್ರವಲ್ಲದೆ, ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ ಠಾಕ್ರೆ ಅವರನ್ನೂ ಅವಮಾನಿಸಿದ್ದಾರೆ. ಇಂತಹ ಹಿಂದೂ ದ್ವೇಷಿಗಳ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಬಗ್ಗೆ ಹಿಂದೂಗಳು ದೂರು ನೀಡಿ, ಅವರಿಗೆ ಶಿಕ್ಷೆಯಾಗಲು ಪ್ರಯತ್ನಿಸಿದರೆ ಮಾತ್ರ ಇತರರಿಗೆ ಪಾಠವಾಗುತ್ತದೆ.
  • ವರಾಹ ಮತ್ತು ಹಂದಿ ನಡುವಿನ ವ್ಯತ್ಯಾಸವನ್ನು ಸಹ ತಿಳಿಯದವರು ಈ ರೀತಿ ರಾಜಕೀಯ ದ್ವೇಷದಿಂದ, ವಿರೋಧದಿಂದ ಶ್ರೀ ವಿಷ್ಣುವಿನ ಅವತಾರವನ್ನು ಅವಮಾನಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಲೇಬೇಕು.