ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ ಅವರ ಹಿಂದೂ ದ್ವೇಷಿ ಹೇಳಿಕೆ

ಮುಂಬಯಿ – ನಿತೇಶ ರಾಣೆ ಅವರು ತಮ್ಮ ಪೂರ್ವಜರನ್ನು ಮರೆತಿಲ್ಲ ಎಂಬುದು ಒಳ್ಳೆಯ ವಿಷಯ. ಅದಕ್ಕಾಗಿಯೇ ಅವರು ಈ ಎಲ್ಲ ಹಬ್ಬಗಳನ್ನು ಆಚರಿಸಲು ಬಯಸುತ್ತಾರೆ. ಇದು ತುಂಬಾ ಒಳ್ಳೆಯ ವಿಷಯ. ಇದರ ನಿಮಿತ್ತ ನಿತೇಶ್ ರಾಣೆ ಮತ್ತು ಅವರ ಬೆಂಬಲಿಗರು ಈ ದಿನವನ್ನು ಆಚರಿಸುವಾಗ ಇಡೀ ದಿನ ‘ವರಾಹ ಅವತಾರ’ದಲ್ಲಿರಬೇಕು. ಈ ಅವತಾರದಲ್ಲಿ ಅವರು ಈ ಜಯಂತಿಯನ್ನು ಆಚರಿಸಬೇಕು. ಆಗ ಮಾತ್ರ ನಿಜವಾದ ವರಾಹ ಜಯಂತಿ ಆಚರಿಸಲು ಸಾಧ್ಯ ಎಂಬ ಅವಮಾನಕರ ರೀತಿಯಲ್ಲಿ ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ವರಾಹ ಜಯಂತಿ ಆಚರಿಸುವಂತೆ ಮಾಡಿದ ಕರೆಯನ್ನು ಟೀಕಿಸಿದರು. ಆಗಸ್ಟ್ 25 ರಂದು ವರಾಹ ಜಯಂತಿಯಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಅವರ ಹಿಂದೂ ದ್ವೇಷಿ ಹೇಳಿಕೆ!
‘ವರಾಹವನ್ನು ಹಿಡಿದು ತನ್ನ ಮನೆಗೆ ತಂದು ಪೂಜಿಸಬೇಕಂತೆ’
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಕೂಡ ನಿತೇಶ್ ರಾಣೆ ಅವರನ್ನು ಟೀಕಿಸಿ, ವರಾಹ ಜಯಂತಿ ಆಚರಿಸಬೇಕಿದ್ದರೆ, ನಿತೇಶ್ ರಾಣೆ ಮೊದಲು ತಮ್ಮ ಮನೆಯಿಂದಲೇ ಅದನ್ನು ಪ್ರಾರಂಭಿಸಬೇಕು. ಅವರು ಕೆಲವು ವರಾಹಗಳನ್ನು ಹಿಡಿದು ತಂದು ಅವುಗಳನ್ನು ಪೂಜಿಸಬೇಕು. ವರಾಹ ಪೂಜೆ ಎಂದರೆ ವರಾಹದ ಚಿತ್ರವನ್ನು ಪೂಜಿಸುವುದಲ್ಲ, ಆದರೆ ಅವರು ನಿಜವಾದ ವರಾಹವನ್ನು ಹಿಡಿದು ತಂದು ತಮ್ಮ ಮನೆಯಲ್ಲಿಯೇ ಪೂಜಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ