ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ ಅವರ ಹಿಂದೂ ದ್ವೇಷಿ ಹೇಳಿಕೆ

ಮುಂಬಯಿ – ನಿತೇಶ ರಾಣೆ ಅವರು ತಮ್ಮ ಪೂರ್ವಜರನ್ನು ಮರೆತಿಲ್ಲ ಎಂಬುದು ಒಳ್ಳೆಯ ವಿಷಯ. ಅದಕ್ಕಾಗಿಯೇ ಅವರು ಈ ಎಲ್ಲ ಹಬ್ಬಗಳನ್ನು ಆಚರಿಸಲು ಬಯಸುತ್ತಾರೆ. ಇದು ತುಂಬಾ ಒಳ್ಳೆಯ ವಿಷಯ. ಇದರ ನಿಮಿತ್ತ ನಿತೇಶ್ ರಾಣೆ ಮತ್ತು ಅವರ ಬೆಂಬಲಿಗರು ಈ ದಿನವನ್ನು ಆಚರಿಸುವಾಗ ಇಡೀ ದಿನ ‘ವರಾಹ ಅವತಾರ’ದಲ್ಲಿರಬೇಕು. ಈ ಅವತಾರದಲ್ಲಿ ಅವರು ಈ ಜಯಂತಿಯನ್ನು ಆಚರಿಸಬೇಕು. ಆಗ ಮಾತ್ರ ನಿಜವಾದ ವರಾಹ ಜಯಂತಿ ಆಚರಿಸಲು ಸಾಧ್ಯ ಎಂಬ ಅವಮಾನಕರ ರೀತಿಯಲ್ಲಿ ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ ನಾಯಕಿ ಸುಷ್ಮಾ ಅಂಧಾರೆ, ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ವರಾಹ ಜಯಂತಿ ಆಚರಿಸುವಂತೆ ಮಾಡಿದ ಕರೆಯನ್ನು ಟೀಕಿಸಿದರು. ಆಗಸ್ಟ್ 25 ರಂದು ವರಾಹ ಜಯಂತಿಯಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಅವರ ಹಿಂದೂ ದ್ವೇಷಿ ಹೇಳಿಕೆ!
‘ವರಾಹವನ್ನು ಹಿಡಿದು ತನ್ನ ಮನೆಗೆ ತಂದು ಪೂಜಿಸಬೇಕಂತೆ’
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಶಾಸಕ ಅಮೋಲ್ ಮಿಟಕರಿ ಕೂಡ ನಿತೇಶ್ ರಾಣೆ ಅವರನ್ನು ಟೀಕಿಸಿ, ವರಾಹ ಜಯಂತಿ ಆಚರಿಸಬೇಕಿದ್ದರೆ, ನಿತೇಶ್ ರಾಣೆ ಮೊದಲು ತಮ್ಮ ಮನೆಯಿಂದಲೇ ಅದನ್ನು ಪ್ರಾರಂಭಿಸಬೇಕು. ಅವರು ಕೆಲವು ವರಾಹಗಳನ್ನು ಹಿಡಿದು ತಂದು ಅವುಗಳನ್ನು ಪೂಜಿಸಬೇಕು. ವರಾಹ ಪೂಜೆ ಎಂದರೆ ವರಾಹದ ಚಿತ್ರವನ್ನು ಪೂಜಿಸುವುದಲ್ಲ, ಆದರೆ ಅವರು ನಿಜವಾದ ವರಾಹವನ್ನು ಹಿಡಿದು ತಂದು ತಮ್ಮ ಮನೆಯಲ್ಲಿಯೇ ಪೂಜಿಸಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ