
ಕುವಾಲಾಲಂಪುರ (ಮಲೇಷ್ಯಾ) – ಇಲ್ಲಿನ ತೆರೆಂಗಾನೂ ರಾಜ್ಯದಲ್ಲಿ ಕಟ್ಟರ ‘ಪ್ಯಾನ್-ಮಲೇಷ್ಯನ್ ಇಸ್ಲಾಮಿಕ್ ಪಾರ್ಟಿ’ಯ (ಅಖಿಲ ಮಲೇಷ್ಯಾ ಇಸ್ಲಾಮಿಕ್ ಪಕ್ಷ – ‘ಪಿ.ಎ.ಎಸ್.’ನ) ಸರಕಾರವಿದೆ. ಇಲ್ಲಿ ವಿರೋಧ ಪಕ್ಷವೇ ಅಸ್ತಿತ್ವದಲ್ಲಿ ಇಲ್ಲ; ಏಕೆಂದರೆ ಎಲ್ಲ 32 ಶಾಸಕರು ಇದೇ ಪಕ್ಷದವರು ಆಗಿದ್ದಾರೆ. ಶರೀಯತ್ ಅನ್ನು ಜಾರಿಗೆ ತರಲು ಆಗ್ರಹಿಸುವ ಈ ಪಕ್ಷವು ನಾಗರಿಕರು ಶುಕ್ರವಾರದ ನಮಾಜ್ ಮಾಡುವುದನ್ನು ಮರೆತರೆ ಅಥವಾ ಮಾಡದಿದ್ದರೆ ಅವರಿಗೆ 2 ವರ್ಷ ಜೈಲು ಅಥವಾ 3 ಸಾವಿರ ರಿಂಗಿಟ್ (62 ಸಾವಿರ ರೂಪಾಯಿ) ದಂಡ ಅಥವಾ ಎರಡನ್ನೂ ವಿಧಿಸುವ ಕಾನೂನನ್ನು ಜಾರಿಗೊಳಿಸಿದೆ. ಈ ಕಾನೂನಿನ ಅನುಷ್ಠಾನದ ಅಧಿಕಾರ ಸಾರ್ವಜನಿಕ ಮತ್ತು ಧಾರ್ಮಿಕ ವ್ಯಕ್ತಿಗಳಿಗೆ ಇರುತ್ತದೆ ಎಂದು ಸರಕಾರ ಹೇಳಿದೆ.
🇲🇾 In Malaysia’s Terengganu state, new Sharia penalties for Muslim men skipping Friday prayers without valid reason:
⚖️ First-time offenders risk
➡️Up to 2 years jail
➡️Fine of 3,000 ringgit (₹42,000 / $710)
➡️Or both#ShariaLaw
VC: @anjanaomkashyappic.twitter.com/96atelUa56— Sanatan Prabhat (@SanatanPrabhat) August 21, 2025
ತೆರೆಂಗಾನೂ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದು, ಇಲ್ಲಿನ 12 ಲಕ್ಷ ಜನಸಂಖ್ಯೆಯಲ್ಲಿ ಶೇ.97 ಕ್ಕಿಂತ ಹೆಚ್ಚು ಜನರು ಮುಸಲ್ಮಾನರಾಗಿದ್ದಾರೆ. ಇದರ ಮೊದಲು ಕೂಡ ನಮಾಜ್ ಮಾಡದವರಿಗೆ ಶಿಕ್ಷೆ ವಿಧಿಸುವ ಕಾನೂನು ಇತ್ತು. ಸತತ 3 ಶುಕ್ರವಾರಗಳ ನಮಾಜ್ ಗೆ ಹಾಜರಾಗದವರಿಗೆ ಗರಿಷ್ಠ 6 ತಿಂಗಳು ಜೈಲು ಅಥವಾ 1 ಸಾವಿರ ರಿಂಗಿಟ್ (ಸುಮಾರು 20,606 ರೂಪಾಯಿ) ದಂಡ ಒಳಗೊಂಡಿತ್ತು. ಮಲೇಷ್ಯಾದ 13 ರಾಜ್ಯಗಳಲ್ಲಿ 4 ರಾಜ್ಯಗಳಲ್ಲಿ ‘ಪಿ.ಎ.ಎಸ್.’ ಸರಕಾರವಿದೆ.
ಇಸ್ಲಾಂ ಅನ್ನು ಉಳಿಸಲು ಕಠಿಣ ಶಿಕ್ಷೆಯ ನಿಯಮ!
ತೆರೆಂಗಾನೂ ರಾಜ್ಯ ವಿಧಾನಸಭೆಯ ಸದಸ್ಯ ಮಹಮ್ಮದ್ ಖಲೀಲ್ ಹಾದಿ ಮಾತನಾಡಿ, ಇಸ್ಲಾಂ ಧರ್ಮವನ್ನು ಉಳಿಸಲು ಕೊನೆಯ ಉಪಾಯವಾಗಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗುವುದು. ಶುಕ್ರವಾರದ ನಮಾಜ್ ಮುಸಲ್ಮಾನರಲ್ಲಿ ಒಂದು ಧಾರ್ಮಿಕ ಸಂಕೇತವಾಗಿದೆ ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’