|

ಮುಂಬಯಿ – ‘ಡೈರಿ ಮಿಲ್ಕ್’ ಕ್ಯಾಡ್ಬರಿ ಚಾಕೊಲೇಟ್ನ ಹೊಸ ಪ್ಯಾಕ್ ಮೇಲೆ ಇಂಗ್ಲಿಷ್ ಪದಗಳು ಮತ್ತು ಸಂಭಾಷಣೆಗಳಿಗೆ ಮರಾಠಿ ಅರ್ಥಗಳನ್ನು ಮುದ್ರಿಸಲಾಗಿದೆ. ಮರಾಠಿ ಭಾಷೆಗೆ ಸಂಬಂಧಿಸಿದ ಈ ಪ್ರಯತ್ನಕ್ಕಾಗಿ, ‘ಬೃಹನ್ಮಹಾರಾಷ್ಟ್ರ ಮರಾಠಿ ಮಂಡಳ’ವು ಕ್ಯಾಡ್ಬರಿಗೆ ‘ಮಂಡಳಿ ಕೃತಜ್ಞವಾಗಿದೆ’ ಎಂದು ಹೇಳಿದೆ. “ನಿಮ್ಮ ಭಾಷೆಯ ಬಗ್ಗೆ ದೃಢವಾಗಿರಿ, ಜಗತ್ತು ಖಂಡಿತ ನಿಮ್ಮನ್ನು ಗುರುತಿಸುತ್ತದೆ” ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ಹೇಳಿದ್ದರು. ಅವರ ಈ ಹೇಳಿಕೆಯ ಬಗ್ಗೆ ಕ್ಯಾಡ್ಬರಿಯ ಹೊಸ ಪ್ಯಾಕ್ನ ಕಾರಣದಿಂದ ಚರ್ಚೆಯಲ್ಲಿದೆ.
ಪ್ಯಾಕ್ ಮೇಲೆ ಬರೆದಿರುವ ಪದಗಳು ಮತ್ತು ವಾಕ್ಯಗಳು
೧. ಥ್ಯಾಂಕ್ ಯು – ಧನ್ಯವಾದ
೨. ಸಾರಿ – ಕ್ಷಮಾ ಕರಾ (ಕ್ಷಮಿಸಿ)
೩. ಲಿಟಲ್ – ಜರಾ (ಸ್ವಲ್ಪ)
೪. ಮಾರ್ನಿಂಗ್ – ಸಕಾಳ (ಬೆಳಗ್ಗೆ)
೫. ವಾಟ್ – ಕಾ ? (ಏನು?)
೬. ಹೌ ಆರ್ ಯು? – ಕಸೆ ಆಹಾತ ? (ಹೇಗಿದ್ದೀರಾ?)
೭. ನೀಡ್ ಹೆಲ್ಪ್? – ಮದತ ಹವಿ ಕಾ ? (ಸಹಾಯ ಬೇಕೇ?)
೮. ಈವ್ನಿಂಗ್ – ಸಂಧ್ಯಾಕಾಳ (ಸಂಜೆ)

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಂದ ಪ್ರತಿಕ್ರಿಯೆಗಳು!
೧. ಮಹಾರಾಷ್ಟ್ರ ರಾಜ್ಯ ಸರಕಾರವು ಮರಾಠಿ ಸಂರಕ್ಷಣೆಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
೨. ಮುನ್ಸಿಪಲ್ ಕಾರ್ಪೊರೇಷನ್ಗಳು ಜಾಹೀರಾತುಗಳ ಮೂಲಕ ಇಂತಹ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು.
೩. ಮರಾಠಿ ಉದ್ಯಮಿಗಳು ತಮ್ಮ ಉತ್ಪನ್ನಗಳ ಮೇಲೆ ಇಂತಹ ಪ್ರಯತ್ನಗಳನ್ನು ಮಾಡಬೇಕು.
ಸಂಪಾದಕೀಯ ನಿಲುವುಇತರ ಕಂಪನಿಗಳು ಮತ್ತು ಉತ್ಪನ್ನಗಳು ಇದೇ ರೀತಿ ಮರಾಠಿಯನ್ನು ಪ್ರಚಾರ ಮಾಡಬೇಕು! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !