|

ಚೆನ್ನೈ (ತಮಿಳುನಾಡು), 16 ಆಗಸ್ಟ್ (ಸುದ್ದಿ) – ಇಲ್ಲಿ ವಿಶ್ವ ವಾರಕರಿ ಸಂಸ್ಥಾನವು ಸಂತ ಜ್ಞಾನೇಶ್ವರ ಮಹಾರಾಜರ 750ನೇ ಜಯಂತಿಯನ್ನು ಭಾವಪೂರ್ಣ ಸಮಾರಂಭದ ಮೂಲಕ ಆಚರಿಸಿತು. ಈ ಸಮಾರಂಭಕ್ಕೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಜೊತೆಗೆ, ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ 750 ವಾರಕರಿಗಳು ಮಾವುಲಿ ಅವರ 750ನೇ ಜಯಂತಿಯ ನಿಮಿತ್ತ ಜ್ಞಾನೇಶ್ವರಿಯ ಪಠಣ ಮಾಡಿದರು. ಈ ಸಮಾರಂಭವು ನಗರದ ಆಡ್ಯಾರ್ ಪ್ರದೇಶದಲ್ಲಿರುವ ಶ್ರೀ ಆನಂದ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ನಡೆಯಿತು.

ಸಮಾರಂಭದ ಶುಭಾರಂಭವು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಹಾಗೆಯೇ ಡಾ. ಶ್ರೀ ರಘುನಾಥದಾಸ ಮಹಾರಾಜ್ ಅವರ ಮಾತೋಶ್ರೀ ಮೀನಾಲೋಚನಿ, ಡಾ. ಶ್ರೀ ರಘುನಾಥದಾಸ ಮಹಾರಾಜ ಮತ್ತು ಅವರ ಪತ್ನಿ ಸೌ. ಶುಭಲಕ್ಷ್ಮಿ ಅವರು ದೀಪ ಬೆಳಗಿಸುವ ಮೂಲಕ ಮಾಡಿದರು. ಈ ಸಂದರ್ಭದಲ್ಲಿ ‘ವಿಶ್ವ ವಾರಕರಿ ಸಂಸ್ಥಾನ’ದ ಉತ್ತರಾಧಿಕಾರಿಗಳಾದ ಡಾ. ಶ್ರೀ ರಘುನಾಥದಾಸ ಮಹಾರಾಜ್ ಅವರು ರಚಿಸಿರುವ ‘ರಾಜವಿದ್ಯಾ’ (ಜ್ಞಾನೇಶ್ವರಿಯ 9ನೇ ಅಧ್ಯಾಯದ ಭಾಷ್ಯ) ಮತ್ತು ‘ಜ್ಞಾನೋತ್ತರ ಭಕ್ತಿ’ (ಸಂತ ಜ್ಞಾನೇಶ್ವರ ಮಹಾರಾಜರ ಬೋಧನೆಗಳ ರಹಸ್ಯ) ಎಂಬ ಗ್ರಂಥಗಳನ್ನು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಆರ್.ಎನ್. ರವಿ ಅವರು ಬಿಡುಗಡೆ ಮಾಡಿದರು. ಡಾ. ಶ್ರೀ ರಘುನಾಥದಾಸ ಮಹಾರಾಜ್ ಅವರು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಸಂತ ಜ್ಞಾನೇಶ್ವರ ಮಹಾರಾಜರ ಮೂರ್ತಿಯನ್ನು ನೀಡಿ ಸನ್ಮಾನಿಸಿದರು.

‘ವಿಶ್ವ ವಾರಕರಿ ಸಂಸ್ಥಾನ’ದ ಕಾರ್ಯ!
ವಿಶ್ವ ವಾರಕರಿ ಸಂಸ್ಥಾನವು ಕಳೆದ 30 ವರ್ಷಗಳಿಂದ ಮಹಾರಾಷ್ಟ್ರದ ಭಕ್ತಿ ಪರಂಪರೆಯನ್ನು ವಿಶ್ವಾದ್ಯಂತ ಪ್ರಚಾರ ಮಾಡುತ್ತಿದೆ. ಇದರ ಅಡಿಯಲ್ಲಿ, ಸಂಸ್ಥಾನವು ತಮಿಳುನಾಡು ರಾಜ್ಯದ 15 ಸಾವಿರ ಜನರಿಗೆ ಅಭಂಗ ಮತ್ತು ಜ್ಞಾನೇಶ್ವರಿಯ ಪಠಣದ ತರಬೇತಿ ನೀಡಿದೆ. ವಿಶ್ವಾದ್ಯಂತ 5 ಲಕ್ಷ ತಮಿಳು ಭಕ್ತರು ಈ ಸಂಸ್ಥಾನದ ವಿವಿಧ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ