ಕೇರಳದಲ್ಲಿ ಇನ್ನೊಂದು ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ!

ಕೊಚ್ಚಿ (ಕೇರಳ) – ಕೊಚ್ಚಿಯ ಕೊಠಮಂಗಲಂ ಪೊಲೀಸರು ಪರವೂರ ಇಲ್ಲಿನ ರಮೀಜ್ ಎಂಬ ಮುಸ್ಲಿಂ ಯುವಕನನ್ನು ಶಿಕ್ಷಕರ ತರಬೇತಿ ಕಾಲೇಜಿನ 23 ವರ್ಷದ ಕ್ರೈಸ್ತ ವಿದ್ಯಾರ್ಥಿನಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ. ರಮೀಜ್ ವಿರುದ್ಧ ಸಂತ್ರಸ್ತೆಯ ಮೇಲೆ ದೈಹಿಕ ದೌರ್ಜನ್ಯ ಮತ್ತು ಆಕೆಯನ್ನು ಮತಾಂತರಕ್ಕೆ ಒತ್ತಾಯಿಸಿದ ಆರೋಪಗಳಿವೆ.
🚨 Another ‘Love Jihad’-linked tragedy in Kerala
A young woman has died by suicide after sustained pressure from Muslim youth Rameez — now under arrest.
No one can expect the Communist govt in Kerala to act against Love Jihad – the Centre must step in to protect Hindus in the… pic.twitter.com/lNODpq5tAC
— Sanatan Prabhat (@SanatanPrabhat) August 11, 2025
1. ಮೃತ ಯುವತಿಯ ತಾಯಿ ಮಾತನಾಡಿ, ‘ನನ್ನ ಮಗಳನ್ನು ರಮೀಜ್ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದನು. ಅವನು ಅವಳ ಮೇಲೆ ಧರ್ಮ ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದನು. ಆಕೆಯನ್ನು ಪುನಾದಲ್ಲಿ ಮತಾಂತರಗೊಳಿಸಲು ಕರೆದೊಯ್ಯುವ ಅವನ ಪ್ರಯತ್ನವನ್ನು ವಿರೋಧಿಸಿದ್ದರಿಂದ, ಅವನು ಅವಳನ್ನು ಕೋಣೆಯಲ್ಲಿ ಕೂಡಿ ಹಾಕಿ ಹೊಡೆದಿದ್ದನು’ ಎಂದು ಹೇಳಿದ್ದಾರೆ.
2. ಪೊಲೀಸರಿಗೆ ಸಿಕ್ಕಿರುವ ಯುವತಿಯ ಪತ್ರದಲ್ಲಿ, ರಮೀಜ್ ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ, ಕೋಣೆಯಲ್ಲಿ ಕೂಡಿ ಹಾಕಿರುವ ಮತ್ತು ಮತಾಂತರಕ್ಕೆ ಒತ್ತಾಯಿಸಿದ ಆರೋಪ ಇದೆ.
3. ಪೊಲೀಸ್ ತನಿಖೆಯಲ್ಲಿ ರಮೀಜ್ ಆಕೆಗೆ ಕಿರುಕುಳ ನೀಡಿದ ಪುರಾವೆಗಳು ದೊರೆತಿವೆ. ಆತನ ಕುಟುಂಬದ ಸದಸ್ಯರನ್ನು ಕೂಡ ಸಹ-ಆರೋಪಿಗಳನ್ನಾಗಿ ಮಾಡುವ ಸಾಧ್ಯತೆ ಇದೆ. ಈ ಪ್ರಕರಣದ ಬಗ್ಗೆ ಕೊಠಮಂಗಲಂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದ್ ತಡೆಯಲು ಕೇರಳದ ಸಾಮ್ಯವಾದಿ ಸರಕಾರ ಏನನ್ನೂ ಮಾಡುವುದಿಲ್ಲ, ಆದ್ದರಿಂದ ಕೇಂದ್ರ ಸರಕಾರವೇ ಹಿಂದೂಗಳ ರಕ್ಷಣೆ ಮಾಡಬೇಕು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ