
ಮುಂಬಯಿ – ರಾಜ್ಯದಲ್ಲಿ ಮಾದಕ ಪದಾರ್ಥಗಳ ಮಾರಾಟ, ಸಾಗಾಟ ಮತ್ತು ಖರೀದಿಯನ್ನು ನಿಯಂತ್ರಿಸಲು ಕಾರ್ಯಾಚರಣೆಗಳನ್ನು ಹೆಚ್ಚಿಸಬೇಕು. ಮಾದಕ ಪದಾರ್ಥ ವಿರೋಧಿ ಕಾರ್ಯಪಡೆಗಳ ಪ್ರಾದೇಶಿಕ ಕಚೇರಿಗಳಿಗೆ ಸ್ಥಳಾವಕಾಶ ಹುಡುಕುವುದು, ಕಚೇರಿಗಳನ್ನು ಪ್ರಾರಂಭಿಸುವುದು, ನೇಮಕಾತಿ ಮಾಡುವುದು ಇತ್ಯಾದಿಗಳನ್ನು ಪೂರ್ಣಗೊಳಿಸಲು ಯೋಜನಾಬದ್ಧ ಮತ್ತು ಕಾಲಮಿತಿಯ ಕಾರ್ಯಕ್ರಮವನ್ನು ಜಾರಿಗೊಳಿಸಬೇಕು ಎಂದು ಗೃಹ (ನಗರ) ರಾಜ್ಯ ಸಚಿವ ಯೋಗೇಶ ಕದಮ ಅವರು ಸೂಚನೆ ನೀಡಿದ್ದಾರೆ.
ಮಾದಕ ಪದಾರ್ಥ ವಿರೋಧಿ ಕಾರ್ಯಪಡೆಯನ್ನು (ಆಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್) ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕು. ಈ ವಿಷಯದಲ್ಲಿ ನ್ಯಾಯಾಲಯದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಪ್ರಕರಣಗಳ ವಿವರವಾದ ಮಾಹಿತಿಯನ್ನು ನಿಯಮಿತವಾಗಿ ಸಲ್ಲಿಸಬೇಕು ಎಂದು ರಾಜ್ಯ ಸಚಿವ ಕದಮ ನಿರ್ದೇಶನ ನೀಡಿದ್ದಾರೆ.
ಸಮುದ್ರ ಮಾರ್ಗದ ಮೂಲಕ ಮಾದಕ ಪದಾರ್ಥಗಳು ಹೆಚ್ಚು ಬರುತ್ತಿರುವುದರಿಂದ, ಮಾದಕ ಪದಾರ್ಥ ವಿರೋಧಿ ಪಡೆಗೆ ಕೆಲವು ವಿಶೇಷ ಉಪಕರಣಗಳು ಮತ್ತು ವಾಹನಗಳನ್ನು ನೀಡಬೇಕು. ಕರಾವಳಿ ಪ್ರದೇಶಗಳಲ್ಲಿ ನಡೆಯುವ ಮಾದಕ ಪದಾರ್ಥಗಳ ಖರೀದಿ-ಮಾರಾಟದ ಮೇಲೆ ನಿಗಾ ಇಡಬೇಕು ಮತ್ತು ಕ್ರಮಗಳನ್ನು ಹೆಚ್ಚಿಸಬೇಕು ಎಂದು ರಾಜ್ಯ ಸಚಿವ ಕದಮ ಈ ಸಂದರ್ಭದಲ್ಲಿ ಸೂಚಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!