ದೇಶವನ್ನು ವಿಭಜಿಸಿದವರು ಈಗ ಕೇಸರಿ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ! – Jyotish Peeth Swamy Slams Congress

ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಂದ ಕಾಂಗ್ರೆಸ್ ವಿರುದ್ಧ ಟೀಕೆ

ನವದೆಹಲಿ – ದೇಶವನ್ನು ವಿಭಜಿಸಿದವರ ಅನುಯಾಯಿಗಳು ಈಗ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶವನ್ನು ಎರಡು ಹೋಳಾಗಿ ಮಾಡಿದವರು ನಾವುಗಳಲ್ಲ. ಹಿಂದೂಗಳು ಎಂದಿಗೂ ದೇಶವನ್ನು ವಿಭಜಿಸುವ ಮಾತನಾಡುವುದಿಲ್ಲ. ಅವರು ಒಗ್ಗಟ್ಟಿನಿಂದ ಬದುಕುತ್ತಾರೆ. ನಮ್ಮಿಂದ ದೇಶ ವಿಭಜನೆಯಾಗಿಲ್ಲ ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಕೇಸರಿ ಭಯೋತ್ಪಾದನೆಯ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.

ಭಯೋತ್ಪಾದನೆಗೆ ಯಾವುದೇ ಬಣ್ಣ ಅಥವಾ ಧರ್ಮವಿಲ್ಲ!

ಕೇಸರಿ ಭಯೋತ್ಪಾದನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಶಂಕರಾಚಾರ್ಯರು ಉತ್ತರಿಸಿ, ಭಯೋತ್ಪಾದನೆಗೆ ಯಾವುದೇ ಬಣ್ಣ ಅಥವಾ ಧರ್ಮವಿಲ್ಲ. ಭಯೋತ್ಪಾದಕ ಅಂದರೆ ಭಯೋತ್ಪಾದಕನೇ. ಕೇಸರಿ ಭಯೋತ್ಪಾದಕನಾದರೆ, ನಾವು ಅವನನ್ನು ಪೂಜಿಸುತ್ತೇವೆಯೇ? ಬಣ್ಣ ಮತ್ತು ಭಯೋತ್ಪಾದನೆಗೆ ಏನು ಸಂಬಂಧ? ಭಯೋತ್ಪಾದನೆಯ ಬಗ್ಗೆ ಕನಿಕರ ತೋರಿಸಬಾರದು. ಮುಂಬಯಿ ಸ್ಫೋಟದಲ್ಲಿ ಭಯೋತ್ಪಾದಕರು ಸಿಕ್ಕಿಲ್ಲ. ಮಾಲೆಗಾಂವ್ ಸ್ಫೋಟದ ಆರೋಪಿಗಳು ಸಿಕ್ಕಿಲ್ಲ ಎಂದು ಅವರು ಹೇಳಿದರು.