
ಮುಂಬಯಿ – ಮಹಾರಾಷ್ಟ್ರ ಸರಕಾರವು ಗೋಮಾತೆಗೆ ‘ರಾಜ್ಯಮಾತೆ’ಯ ಸ್ಥಾನಮಾನವನ್ನು ನೀಡಿದೆ; ಆದರೆ ಈ ಬಗ್ಗೆ ರಾಜ್ಯ ಶಿಷ್ಟಾಚಾರವನ್ನು ಇನ್ನೂ ಘೋಷಿಸಿಲ್ಲ. ರಾಜ್ಯ ಶಿಷ್ಟಾಚಾರವನ್ನು ಘೋಷಿಸುವವರೆಗೂ, ಗೋಮಾತೆಗೆ ರಾಜ್ಯಮಾತೆಯ ಸ್ಥಾನಮಾನ ಕೇವಲ ಕಾಗದದ ಮೇಲೆಯೇ ಮಾತ್ರ ಇರುತ್ತದೆ. ಮಹಾರಾಷ್ಟ್ರ ಸರಕಾರವು ಒಂದು ತಿಂಗಳೊಳಗೆ ರಾಜ್ಯಮಾತೆಯ ಕುರಿತಾದ ರಾಜ್ಯ ಶಿಷ್ಟಾಚಾರ ಮತ್ತು ಗೋಮಾತೆಯ ಆಚಾರ ಸಂಹಿತೆಯನ್ನು ಘೋಷಿಸಬೇಕು ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಆಗಸ್ಟ್ 3 ರಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
🕉️ “Maharashtra Govt must bring a law to protect our Go-mata within a month!” –
Jyotirmath Shankaracharya Swami Avimukteshwaranand Ji (@jyotirmathah)🙏 While steps are being taken, Hindus expect a strong crackdown on cow smuggling.
🐄 Protection of Go-mata is not optional;… pic.twitter.com/bOPEahP2Ii
— Sanatan Prabhat (@SanatanPrabhat) August 4, 2025
ಚಾತುರ್ಮಾಸದ ನಿಮಿತ್ತ, ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಮುಂಬಯಿಯ ಬೊರಿವಲಿಯಲ್ಲಿ ಎರಡು ದಿನಗಳ ‘ಗೋ ಸಂಸದ್’ ಅನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬೇಡಿಕೆಯನ್ನು ಮಂಡಿಸಿದರು. ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸಲು ಭಾರತೀಯ ಸಂಸತ್ತಿಗೆ ಸಮಾನಾಂತರವಾಗಿ ‘ಗೋ ಸಂಸದ್’ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದೊಂದು ‘ರಾಮಾ ಗೋಧಾಮ’ ಸ್ಥಾಪಿಸಲಾಗುವುದು. ಪ್ರತಿಯೊಂದು ರಾಮಾ ಗೋಧಾಮದಲ್ಲಿ 108 ಗೋಮಾತೆಗಳು ಇರುತ್ತವೆ. ರಾಮಾ ಗೋಧಾಮದಲ್ಲಿ ಗೋಮಾತೆಗಳು ಸಂತೋಷದಿಂದ ವಿಹರಿಸುತ್ತವೆ. ಅವು ಹಾಲಿನೊಂದಿಗೆ ಆಶೀರ್ವಾದವನ್ನೂ ನೀಡುತ್ತವೆ. ರಾಮಾ ಗೋಧಾಮಗಳು ರಾಷ್ಟ್ರದ ಉನ್ನತಿಯ ಸಂಕೇತಗಳಾಗಿವೆ. ಇದರಿಂದಾಗಿ ಸನಾತನ ಧರ್ಮವು ಮತ್ತೆ ಸ್ಥಿರತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿಯೂ ರಾಮಾ ಗೋಧಾಮ ಯೋಜನೆಗಳು ಪ್ರಾರಂಭವಾಗಲಿವೆ. ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ 4 ಸಾವಿರದ 123 ರಾಮಾ ಗೋಧಾಮಗಳನ್ನು ಸ್ಥಾಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹೇಳಿದರು.
ಸಂಪಾದಕೀಯ ನಿಲುವುಗೋಮಾತೆಯ ಸಂರಕ್ಷಣೆಗಾಗಿ ಪ್ರಯತ್ನಗಳು ನಡೆಯುತ್ತಿರುವಾಗ, ಗೋ ಕಳ್ಳಸಾಗಣೆಯನ್ನು ತಡೆಯಲು ಸರಕಾರವು ಒಂದು ದೃಢವಾಗಿರಬೇಕು ಎಂಬುದು ಹಿಂದೂಗಳ ಅಪೇಕ್ಷೆ ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ