ಆಂಧ್ರಪ್ರದೇಶ: ಮಂತ್ರಿಯ ಸಹೋದರನಿಂದ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ!

ಪೊಲೀಸರಿಂದ ಬಂಧನ

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಸಚಿವ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಬಿ.ಸಿ. ಜನಾರ್ದನ್ ರೆಡ್ಡಿ ಅವರ ಸಹೋದರ, ನಂದ್ಯಾಲ್ ಜಿಲ್ಲೆಯ ಕೋಲಿಮಿಗುಂಡ್ಲಾ ದೇವಸ್ಥಾನದಲ್ಲಿ ಜಸ್ವಂತ್ ಎಂಬ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಪ್ರಕರಣದಲ್ಲಿ ರೆಡ್ಡಿಯನ್ನು ಬಂಧಿಸಲಾಗಿದೆ.

ಜಸ್ವಂತ್ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದರು. ಪ್ರವೇಶ ನಿಷಿದ್ಧವಿರುವ ಪ್ರದೇಶಕ್ಕೆ ಹೋಗದಂತೆ ಅವರು ಸಚಿವರ ಸಹೋದರ ಬಿ.ಸಿ. ಮದನ್ ಭೂಪಾಲ್ ರೆಡ್ಡಿ ಅವರನ್ನು ತಡೆದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ವಾಗ್ವಾದ ತೀವ್ರಗೊಂಡು ಮದನ್ ರೆಡ್ಡಿಯು ಪೊಲೀಸ್ ಸಿಬ್ಬಂದಿಯನ್ನು ಹಿಂದಕ್ಕೆ ತಳ್ಳಿ ಅವರಿಗೆ ಕಪಾಳಕ್ಕೆ ಹೊಡೆದಿದ್ದಾರೆ.

ಸಚಿವ ಬಿ.ಸಿ. ಜನಾರ್ದನ್ ರೆಡ್ಡಿ ಅವರು ತಮ್ಮ ಸಹೋದರನ ಕೃತ್ಯವನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ. “ಇಂತಹ ಕೃತ್ಯ ಎಸಗಿದವರು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಪೊಲೀಸರಿಗೆ ತಿಳಿಸಿದ್ದೇನೆ” ಎಂದವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಸಹೋದರ ಮಂತ್ರಿ ಎಂಬ ಅಹಂಕಾರದಿಂದ ಹೀಗೆ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!