ಯವತ್ (ಪುಣೆ): ಮತಾಂಧನ ಆಕ್ಷೇಪಾರ್ಹ ಪೋಸ್ಟ್ ಬಳಿಕ ಉದ್ವಿಗ್ನತೆ

  • ಪೋಸ್ಟ್ ಮಾಡಿದವನ ಮನೆ ಮತ್ತು ಮಸೀದಿಯ ವಿಧ್ವಂಸ, ಅನೇಕ ದ್ವಿಚಕ್ರ ವಾಹನಗಳಿಗೆ ಬೆಂಕಿ

  • ಆಕ್ಷೇಪಾರ್ಹ ಪೋಸ್ಟ್ ಮಡಿದ ಸೈಯದ್ ಎಂಬಾತನ ಬಂಧನ!

ಪುಣೆ – ಆಗಸ್ಟ್ 1 ರಂದು ಬೆಳಿಗ್ಗೆ, ದೌಂಡ್ ತಾಲೂಕಿನ ಯವತ್‌ನಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ನಂತರ, ಮಧ್ಯಾಹ್ನ 12 ಗಂಟೆಯ ಬಳಿಕ ಯವತ್‌ನ ವಾರದ ಮಾರುಕಟ್ಟೆಯನ್ನು ಬಂದ್ ಮಾಡಲಾಯಿತು. ಯವತ್‌ನಲ್ಲಿ ಕೆಲವು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಉದ್ರಿಕ್ತ ಗುಂಪೊಂದು ಮಸೀದಿಯೊಂದನ್ನು ಧ್ವಂಸಗೊಳಿಸಿತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿದರು. ಆಕ್ಷೇಪಾರ್ಹ ಪೋಸ್ಟ್ ಹಾಕಿದ ಸೈಯದ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಯವತ್ ಪೊಲೀಸ್ ಇನ್ಸ್‌ಪೆಕ್ಟರ್ ನಾರಾಯಣ ದೇಶಮುಖ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಯುವಕ ಯವತ್ ಪ್ರದೇಶದ ಸಹಕಾರ್ ನಗರದಲ್ಲಿ ವಾಸಿಸುತ್ತಿದ್ದು, ಸ್ಥಳೀಯರು ಸಹಕಾರ್ ನಗರಕ್ಕೆ ಹೋಗಿ ಆತನ ಮನೆಯನ್ನೂ ಧ್ವಂಸಗೊಳಿಸಿದ್ದಾರೆ. ಪೊಲೀಸರ ಸಮಯೋಚಿತ ಹಸ್ತಕ್ಷೇಪದಿಂದ ಮುಂದಿನ ಅನಾಹುತ ತಪ್ಪಿದೆಯಾದರೂ, ಯವತ್ ಪ್ರದೇಶದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಯವತ್‌ನಲ್ಲಿನ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ – ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್

ಒಬ್ಬ ಶಾಸಕರ (ಸಂಗ್ರಾಮ್ ಜಗತಾಪ್, ಎನ್‌ಸಿಪಿ) ಸಭೆ ನಡೆದಿದ್ದರಿಂದ ಒಬ್ಬ ವ್ಯಕ್ತಿ ಸ್ಟೇಟಸ್ (ಇತರರು ನೋಡಲು ಸಾಮಾಜಿಕ ಮಾಧ್ಯಮದಲ್ಲಿಡಲಾಗುವ ಚಿತ್ರ) ಇರಿಸಿದ್ದಾರೆ, ಇದು ಸರಿಯಲ್ಲ. ಎರಡೂ ಸಮುದಾಯದ ಜನರು ಮುಖಾಮುಖಿಯಾದರು. ಇದರಿಂದ ಉದ್ವಿಗ್ನತೆ ಉಂಟಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯವತ್‌ನಲ್ಲಿನ ಅಪರಾಧಿಗಳ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿ ಹೇಳಿದರು.

ಇತ್ತೀಚೆಗೆ ಮತಾಂಧರಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪ!

ಜುಲೈ 26 ರ ರಾತ್ರಿ ಯವತ್‌ನ ನೀಲಕಂಠೇಶ್ವರ ಮಹಾದೇವ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮತಾಂಧನೊಬ್ಬ ಭಗ್ನಗೊಳಿಸಿ ವಿರೂಪಗೊಳಿಸಿದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಅಮಿತ್ ಪಾಪಾ ಸೈಯದ್ ಎಂಬ ಮತಾಂಧನನ್ನು ಜುಲೈ 30 ರಂದು ಬಂಧಿಸಲಾಗಿದೆ ಎಂದು ಪೊಲೀಸರು ಜುಲೈ 31 ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆ ನಂತರ, ಆಗಸ್ಟ್ 1 ರಂದು ಮತ್ತೆ ಆಕ್ಷೇಪಾರ್ಹ ಪೋಸ್ಟ್ ಹಾಕಲಾಗಿದೆ.

ಸಂಪಾದಕೀಯ ನಿಲುವು

  • ಪುಣೆ ಜಿಲ್ಲೆಯಲ್ಲಿ ಮತಾಂಧರು ಹಿಂದೂ ದೇವತೆಗಳ ವಿಗ್ರಹಗಳು ಮತ್ತು ರಾಷ್ಟ್ರೀಯ ನಾಯಕರ ಪ್ರತಿಮೆಗಳನ್ನು ವಿರೂಪಗೊಳಿಸುತ್ತಿರುವ ಘಟನೆಗಳು ಪುನಃ-ಪುನಃ ನಡೆಯುತ್ತಿವೆ. ಇಂತವರಿಗೆ ಕಾನೂನಿನ ಭಯವಿಲ್ಲದಿರುವುದೇ ಇದಕ್ಕೆ ಕಾರಣ!
  • ಮತಾಂಧ ಮುಸಲ್ಮಾನರು ಪದೇ-ಪದೇ ಹಿಂದೂಗಳ ಮತ್ತು ರಾಷ್ಟ್ರಪ್ರೇಮಿಗಳ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ, ಅವರ ಆಕ್ರೋಶಕ್ಕೆ ಯಾರು ಜವಾಬ್ದಾರರು?