malegav Blast : ಮಾಲೆಗಾಂವ್‌ನಲ್ಲಿ ಸಂತೋಷವನ್ನು ಆಚರಿಸುತ್ತಿದ್ದ ಹಿಂದೂಗಳನ್ನು ಪೊಲೀಸರಿಂದ ಅಡ್ಡಗಾಲು !

ಮಾಲೆಗಾಂವ್ – ಮಾಲೆಗಾಂವ್ ಪ್ರಕರಣದ ತೀರ್ಪಿನ ನಂತರ ಇಲ್ಲಿನ ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಸಂಭ್ರಮಿಸಿದರು. ಹಿಂದೂಗಳು ‘ಜೈ ಶ್ರೀರಾಮ್’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಅನೇಕರು ಪೇಡ ಮತ್ತು ಸಿಹಿತಿಂಡಿಗಳನ್ನು ವಿತರಿಸಿದರು. ಎಲ್ಲರೂ ತೀರ್ಪನ್ನು ಸ್ವಾಗತಿಸಿದರು. ಹಿಂದೂಗಳು ಪಟಾಕಿಗಳನ್ನು ಸಿಡಿಸುತ್ತಿದ್ದಾಗ, ಪೊಲೀಸರು ಅವರನ್ನು ಸಂತೋಷವನ್ನು ಆಚರಿಸುವುದನ್ನು ತಡೆದರು. ಘೋಷಣೆಗಳನ್ನು ಕೂಗುತ್ತಿದ್ದ ಹಿಂದೂಗಳನ್ನು ಅವರು ನಿಲ್ಲಿಸಿದರು. ಒಬ್ಬ ಪೊಲೀಸ್ ಅಲ್ಲಿನ ಪಟಾಕಿ ಮಾಲೆಯನ್ನು ಎತ್ತಿಕೊಂಡು ಹೋದರು. ಅಲ್ಲಿಗೆ ಬಂದ ಪೊಲೀಸರ ಬಳಿ ಹಿಂದೂಗಳು, ನಮಗೆ ಸಂತೋಷವನ್ನು ಆಚರಿಸಲು ಬಿಡಿ. ಬೇಕಾದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಿ ಅಥವಾ ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಿ. ನಮಗೆ ಅದೂ ಸರಿ; ಆದರೆ ನಮ್ಮನ್ನು ತಡೆಯಬೇಡಿ ಎಂದು ವಿನಂತಿಸುತ್ತಿದ್ದರು.

ಮಾಲೆಗಾಂವ್‌ನಲ್ಲಿನ ಹಿಂದೂಗಳ ವಿಶಿಷ್ಟ ಪ್ರತಿಕ್ರಿಯೆಗಳು!

ಕಾಂಗ್ರೆಸ್ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹಿಂದುತ್ವವಾದಿಗಳ ವಿರುದ್ಧ ಕ್ರಮ ಕೈಗೊಂಡಿತ್ತು; ಆದರೆ ನ್ಯಾಯಾಲಯದ ತೀರ್ಪಿನಿಂದ ಇದು ಹಿಂದೂ ಧರ್ಮವನ್ನು ಅಪಖ್ಯಾತಿಗೊಳಿಸುವ ಪಿತೂರಿ ಎಂದು ಬಹಿರಂಗವಾಗಿ ಸತ್ಯದ ಗೆಲುವಾಯಿತು. ನಿರಪರಾಧಿಗಳನ್ನು ಸಿಕ್ಕಿಹಾಕಿಕೊಳ್ಳಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ.

ಹಿಂದೂ ಧರ್ಮದಲ್ಲಿ ಎಂದಿಗೂ ಭಯೋತ್ಪಾದಕರು ಇರುವುದಿಲ್ಲ.

ಸಾಧ್ವಿ ಪ್ರಜ್ಞಾಸಿಂಗ್ ಅವರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ. ಅವರನ್ನು ಜಿಲ್ಲೆಗೆ ಬರುವಂತೆ ಆಹ್ವಾನಿಸಿದ್ದೇವೆ. ರಕ್ಷಾಬಂಧನ ನಿಮಿತ್ತ ಅವರ ಕೈಯಿಂದ ನಮ್ಮ ಕೈಗೆ ರಾಖಿ ಕಟ್ಟಿಸಿಕೊಳ್ಳಲು ಬಯಸುತ್ತೇವೆ. ಇಲ್ಲಿ ಅವರಿಗೆ ‘ಹಿಂದೂ ವೀರಶ್ರೀ’ ಪ್ರಶಸ್ತಿ ನೀಡಲಾಗುವುದು.

ಸಂಪಾದಕೀಯ ನಿಲುವು

  • ಹಿಂದುತ್ವದ ವಿಜಯವಾದರೂ ಅದನ್ನು ಆಚರಿಸಲು ಬಿಡದ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ? ಸಂಭ್ರಮಿಸುತ್ತಿರುವ ಮತಾಂಧರನ್ನು ಪೊಲೀಸರು ಈ ರೀತಿ ತಡೆದದ್ದು ಎಂದಾದರೂ ಕೇಳಿದ್ದೀರಾ?
  • ಹಿಂದೂಗಳ ಸಂತೋಷಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುವ ಇಂತಹ ಹಿಂದುದ್ರೋಹಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು!