‘ಪಹಲ್ಗಾಮ್ ದಾಳಿಯಲ್ಲಿ ‘ಭಾರತೀಯರು’ ಕೊಲ್ಲಲ್ಪಟ್ಟರು !’ – ಪ್ರಿಯಾಂಕಾ ಗಾಂಧಿ

  • ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ಹೇಳಿಕೆ

  • ‘ಹಿಂದೂಗಳು ಕೊಲ್ಲಲ್ಪಟ್ಟರು’ ಎಂದು ಹೇಳುತ್ತಾ ಭಾಜಪ ಸಂಸದರಿಂದ ಪ್ರಿಯಂಕಾಗೆ ವಿರೋಧ

ನವದೆಹಲಿ – ಏಪ್ರಿಲ್ 22 ರಂದು ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯರು ಕೊಲ್ಲಲ್ಪಟ್ಟರು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜುಲೈ 29 ರಂದು ಮಧ್ಯಾಹ್ನ ಸಂಸತ್ತಿನಲ್ಲಿ ಹೇಳಿಕೆ ನೀಡಿದರು. ‘ಆಪರೇಷನ್ ಸಿಂದೂರ್’ ಕುರಿತು ಚರ್ಚೆ ನಡೆಯುತ್ತಿದ್ದಾಗ ಅವರು ಮಾತನಾಡುತ್ತಿದ್ದರು. ಭಾಷಣದಲ್ಲಿ ಗಾಂಧಿಯವರು ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಪ್ರವಾಸಿಗರ ಹೆಸರುಗಳನ್ನು ಉಲ್ಲೇಖಿಸಿದರು. ಈ ಸಮಯದಲ್ಲಿ ಅವರು ಎಲ್ಲರನ್ನೂ ‘ಭಾರತೀಯರು’ ಎಂದು ಕರೆದರು. ಆದರೆ, ಈ ವೇಳೆ ಭಾಜಪ ಸಂಸದರು ಇದನ್ನು ವಿರೋಧಿಸಿ ‘ಅವರೆಲ್ಲರೂ ಹಿಂದೂಗಳಾಗಿದ್ದರು’ ಎಂದು ಹೇಳಿದರು. ಅದಕ್ಕೆ ಗಾಂಧಿಯವರು ‘ಅವರು ಭಾರತೀಯರು’ ಎಂದು ಹೇಳಿ ಪ್ರತ್ಯುತ್ತರ ನೀಡಿದರು. ಇದರಿಂದ ಸಂಸತ್ತಿನಲ್ಲಿ ಸ್ವಲ್ಪ ಸಮಯದವರೆಗೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವೆ ‘ಹಿಂದೂ’ ಮತ್ತು ‘ಭಾರತೀಯ’ ಎಂಬ ಸಂಘರ್ಷ ಕಂಡುಬಂದಿತು.

ಪ್ರಿಯಾಂಕಾ ಗಾಂಧಿ ಮಾತು ಮುಂದುವರೆಸಿ,

1. ಪಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಿದ್ದರೂ ಬೈಸಾರನ್‌ ನಲ್ಲಿ ಒಬ್ಬನೇ ಒಬ್ಬ ಸೈನಿಕನಿರಲಿಲ್ಲ. ಸುತ್ತಾಡಲು ಹೋಗಿದ್ದ ಪ್ರವಾಸಿಗರು ಸಂಪೂರ್ಣವಾಗಿ ಸರಕಾರದ ಸುರಕ್ಷತೆಯ ಮೇಲೆ ಅವಲಂಬಿತರಾಗಿದ್ದರು. ಆದರೆ ಸರಕಾರ ಅವರನ್ನು ಗಾಳಿಗೆ ತೂರಿತು.

2. ಪಾಕಿಸ್ತಾನಕ್ಕೆ ಶರಣಾಗುವುದನ್ನು ಹೊರತುಪಡಿಸಿ ಬೇರೆ ದಾರಿಯಿರಲಿಲ್ಲ. ಹಾಗಿದ್ದರೂ ಯುದ್ಧವನ್ನು ಏಕೆ ನಿಲ್ಲಿಸಲಾಯಿತು? ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಏಕೆ ಘೋಷಿಸಿದರು?

3. ಈ ಸರಕಾರಕ್ಕೆ ಕೇವಲ ಶ್ರೇಯಸ್ಸು ಬೇಕು, ಆದರೆ ಶ್ರೇಯಸ್ಸಿನ ಜೊತೆಗೆ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ.

ಸಂಪಾದಕೀಯ ನಿಲುವು

  • ತಮ್ಮ ಪಕ್ಷ ಅಳಿವಿನಂಚಿನಲ್ಲಿರುವಾಗ ಗಾಂಧಿಯವರಿಂದ ಇಂತಹ ಹೇಳಿಕೆಗಳು ಬರುವುದು, ಇದು ‘ವಿನಾಶಕಾಲೇ ವಿಪರೀತ ಬುದ್ಧಿ’ಯ ಲಕ್ಷಣವಾಗಿದೆ. ಇದರಿಂದ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬುದು ರಾಜಕೀಯವಲ್ಲ, ಬದಲಾಗಿ ರಾಷ್ಟ್ರನಿಷ್ಠೆಯ ಕಾರ್ಯ ಎಂಬುದನ್ನು ತಿಳಿದುಕೊಳ್ಳಿರಿ!
  • ಜಿಹಾದಿ ದಾಳಿಗಳ ಬಗ್ಗೆ ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳಿ, ಮತ್ತು ಕೆಲವು ಪ್ರಕರಣಗಳಲ್ಲಿ ಹಿಂದುತ್ವವಾದಿಗಳನ್ನು ಸಿಲುಕಿಸಿ ‘ಹಿಂದೂ ಭಯೋತ್ಪಾದನೆ’ ಎಂದು ಕೂಗಾಡುವ ಕಾಂಗ್ರೆಸ್ ಮತ್ತು ಅದರ ನಾಯಕರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ?